ಒಂದು ತಿಂಗಳಲ್ಲಿ ಕಾವೇರಿ ತೀರ್ಪು
Team Udayavani, Jan 10, 2018, 6:00 AM IST
ಹೊಸದಿಲ್ಲಿ: ದಶಕಗಳಿಂದ ಕಾನೂನು ತಂಟೆಗೆ ಕಾರಣವಾಗಿರುವ ಕಾವೇರಿ ವಿವಾದವು ತೆರೆ ಕಾಣುವ ಸಮಯ ಸಮೀಪಿಸಿದೆ.
ವಿವಾದಕ್ಕೆ ಸಂಬಂಧಿಸಿದ ಅಂತಿಮ ತೀರ್ಪನ್ನು ಇನ್ನು ನಾಲ್ಕು ವಾರಗಳಲ್ಲಿ ಪ್ರಕಟಿಸುವುದಾಗಿ ಸ್ವತಃ ಸುಪ್ರೀಂಕೋರ್ಟ್ ಮಂಗಳವಾರ ಸುಳಿವು ನೀಡಿದೆ.
ಬೆಂಗಳೂರು ಮಹಾನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ಬೇಕು. ಹೀಗಾಗಿ ಜನರು ಜೀವಿಸುವ ಹಕ್ಕನ್ನು ಸುಪ್ರೀಂ ಕೋರ್ಟ್ ರಕ್ಷಿಸಬೇಕು ಎಂದು ಇನ್ಫೋಸಿಸ್ನ ಮಾಜಿ ನಿರ್ದೇಶಕ ಮೋಹನ್ದಾಸ್ ಪೈ, ಉದ್ಯಮಿ ಕಿರಣ್ ಮಜುಂದಾರ್ ಶಾ ನೇತೃತ್ವದ ಪ್ರಮುಖ ನಾಗರಿಕರ ಸಮಿತಿ, ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ (ಬಿಪಿಎಸಿ) 2016ರಲ್ಲಿ ಅರ್ಜಿ ಸಲ್ಲಿಸಿತ್ತು.