ನಾವು ಎದ್ದು ನಿಂತರೆ ಪಂಚಾಚಾರ್ಯರು ಪೀಠ ಸೇರಬೇಕಾಗುತ್ತೆ
Team Udayavani, Jan 10, 2018, 10:35 AM IST
ವಿಜಯಪುರ: ನಮ್ಮ ಹೋರಾಟವನ್ನು ಹೆದರಿಸುವ ಪ್ರಯತ್ನವನ್ನು ಪಂಚಾಚಾರ್ಯರು ಮಾಡುತ್ತಿದ್ದು ಇದಕ್ಕೆ ನಾವು ಬಗ್ಗುವವರಲ್ಲ. ನಾವು ಎದ್ದು ನಿಂತರೆ ಪಂಚಾಚಾರ್ಯರು ತಮ್ಮ ಪೀಠಗಳನ್ನು ಸೇರಬೇಕಾಗುತ್ತದೆ ಎಂದು ರಾಷ್ಟ್ರೀಯ ಬಸವ ಸೇನಾ ರಾಷ್ಟ್ರಾಧ್ಯಕ್ಷ, ಗಣಿ ಮತ್ತು ಭೂಗರ್ಭ ಖಾತೆ ಸಚಿವ ವಿನಯ ಕುಲಕರ್ಣಿ ಗುಡುಗಿದರು.
ಬಬಲೇಶ್ವರದಲ್ಲಿ ಮಂಗಳವಾರ ಮಾತನಾಡಿದ ಅವರು, ನಾವು ಸ್ವತಂತ್ರ ಧರ್ಮ ಹೋರಾಟಕ್ಕಿಳಿದ ಮೇಲೆ ಪಂಚಪೀಠಗಳಿಗೆ ಭಕ್ತರ, ಗ್ರಾಮಗಳ ನೆನಪಾಗಿದೆ. ದಿಢೀರ್ನೆ ಹಳ್ಳಿಗಳಿಗೆ ಬರು ತ್ತಿರುವ ಈ ಪೀಠಾಧಿಧೀಶರು ಬಬಲೇಶ್ವರ ದಂತಹ ಸ್ವಾಮೀಜಿಯನ್ನು ಹಿಡಿದು ಮಠ ಸೇರಿ, ಒಗ್ಗೂಡುತ್ತಿರುವ ಲಿಂಗಾಯತರನ್ನು ಒಡೆಯುವ ಪಿತೂರಿ ಮಾಡುತ್ತಿದ್ದಾರೆ. ಬಹಳ ವರ್ಷಗಳ ನಂತರ ಎಲ್ಲ ಉಪ ಪಂಗಡಗಳವರು ಒಂದಾಗುತ್ತಿದ್ದು ನಾವು ಖಂಡಿತಾ ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದೇ ಪಡೆಯುತ್ತೇವೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಮುಂಚೂಣಿಯಲ್ಲಿಯಲ್ಲಿರುವ ನಾಯಕ ಎಂ.ಬಿ.ಪಾಟೀಲರು ಇದಕ್ಕೆಲ್ಲಾ ಹೆದರುತ್ತಾರೆ ಎಂದು ಪಂಚಪೀಠಗಳು ಭಾವಿಸಿದಂತಿದೆ. ಆದರೆ ಇದು ಎಂದಿಗೂ ಸಾಧ್ಯವಿಲ್ಲ ಎಂದರು.