ಪ್ರತ್ಯೇಕ ಧರ್ಮವಾದರೆ ಬಸವಧರ್ಮ ಸೇರುವೆ
Team Udayavani, Jan 12, 2018, 6:50 AM IST
ಕೂಡಲಸಂಗಮ/ ಬಾಗಲಕೋಟೆ: “ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂಬುದಕ್ಕೆ ನನ್ನ ವೈಯಕ್ತಿಕ ಬೆಂಬಲವಿದೆ. ಮಾದಿಗರು ಹಾಗೂ ಲಿಂಗಾಯತರ ಮಧ್ಯೆ ಅವಿನಾಭಾವ ಸಂಬಂಧವಿದೆ.
ಹೀಗಾಗಿ, ಲಿಂಗಾಯತ ಪ್ರತ್ಯೇಕ ಧರ್ಮ ಆದರೆ ನಾನು ಬಸವ ಧರ್ಮ ಸೇರುತ್ತೇನೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ಬಸವಣ್ಣನವರ ಐಕ್ಯಸ್ಥಳಕ್ಕೆ ಗುರುವಾರ ಭೇಟಿ ನೀಡಿ, ದರ್ಶನ ಪಡೆದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,
“ಬಸವಣ್ಣನವರು ಮಾದಾರ ಚೆನ್ನಯ್ಯನವರನ್ನು ಅಪ್ಪ ಎಂದು ಕರೆದು, ಬಹುದೊಡ್ಡ ಗೌರವ ಕೊಟ್ಟಿದ್ದರು. ಹೀಗಾಗಿ ಬಸವ ಧರ್ಮ ಪ್ರತ್ಯೇಕ ಧರ್ಮವಾದರೆ ನಾನು ಕೂಡ ಬಸವ ಧರ್ಮ ಸೇರುತ್ತೇನೆ. ನಮ್ಮ ಮನೆಯಲ್ಲಿ ಲಿಂಗಾಯತ ಧರ್ಮವನ್ನೇ ಪಾಲಿಸುತ್ತಿದ್ದೇವೆ. ದೇವರ ಜಗಲಿ ಮೇಲೆ ಬಸವಣ್ಣ, ಬುದ್ಧ, ಅಂಬೇಡ್ಕರ್,ಗಾಂಧೀಜಿಯವರ ಫೋಟೋ ಇಟ್ಟು ನಾನು ಪೂಜೆ ಮಾಡುತ್ತೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK