ಒಂದಲ್ಲ, ಎರಡಲ್ಲ, ಸಹಸ್ರಾರು ವಿವೇಕಾನಂದರು!
Team Udayavani, Jan 13, 2018, 6:05 AM IST
ಬೆಳಗಾವಿ: ರಾಯಬಾಗ ತಾಲೂಕಿನ ಮುಗಳಖೋಡ ಜಿಡಗಾ ಮಠದ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಕಾರ್ಯಕ್ರಮದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ 16ರಿಂದ 39 ವಯಸ್ಸಿನ 10,054 ಜನರು
ವಿವೇಕಾನಂದರ ವೇಷ ಧರಿಸಿದರು.
ಜೊತೆಗೆ, 884 ವಾದ್ಯಗಾರರು ಕಹಳೆ, ಜಗ್ಗಲಿಗೆ, ಡೊಳ್ಳು, ಸಂಬಾಳ, ಚಂಡೆ, ಮದ್ದಳೆ, ನಗಾರಿ, ಮೈಸೂರಿನ
ವಾದ್ಯಗಳು ಸೇರಿ ವಿವಿಧ ದೇಸಿ ವಾದ್ಯಗಳನ್ನು ಸಾಮೂಹಿಕವಾಗಿ ಬಾರಿಸಿದರು. ಇವೆರಡೂ ಏಷಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರವೇಶಿಸುವ ಮೂಲಕ ಮಠದ ಹೆಸರು ಇತಿಹಾಸಕ್ಕೆ ಸೇರ್ಪಡೆಯಾ ಯಿತು. ಈ ಸಂಸ್ಥೆಗಳ ಮುಖ್ಯಸ್ಥರಾದ ಡಾ| ಮನೀಷ ವಿಷ್ಣುಯಿ ಹಾಗೂ ಡಾ| ಅನಿತಾ ದೇಸಾಯಿ ಈ ಎರಡೂ ದಾಖಲೆಗಳನ್ನು ವೇದಿಕೆಯಲ್ಲಿ ಘೋಷಿಸಿ, ಶ್ರೀ ರವಿಶಂಕರ ಗುರೂಜಿ ಹಾಗೂ ಡಾ| ಮುರುಘರಾಜೇಂದ್ರ ಸ್ವಾಮಿಗಳಿಗೆ ಪ್ರಮಾಣ ಪತ್ರ ನೀಡಿದರು. ಈ ಮುಂಚೆ 2015ರಲ್ಲಿ ರಾಯಪುರದಲ್ಲಿ ಮಹಾವೀರ ಇಂಟರನ್ಯಾಷನಲ್ ವತಿಯಿಂದ 2576 ಜನ ವಿವೇಕಾನಂದರ ವೇಷ ಧರಿಸಿದ್ದು ದಾಖಲೆಯಾಗಿತ್ತು. ಸ್ವಾಮಿ ವಿವೇಕಾನಂದರ
ವೇಷಧಾರಿಗಳಿಗೆ ಎಸ್.ಎಸ್.ಆರ್ಟ್ಸ್ನ 70 ಜನರ ತಂಡ ಪೇಟಾ ತೊಡಿಸಿತ್ತು. ಜತೆಗೆ ವೇಷಧಾರಿಗಳು ವಿವೇಕಾನಂದರ ಸಂದೇಶವನ್ನು ಸಾಮೂಹಿಕವಾಗಿ ಹೇಳುವ ದಾಖಲೆ ಜ.13ರಂದು ನಿರ್ಮಾಣವಾಗಲಿದೆ. ಈ ದಾಖಲೆಯೊಂದಾದರೆ ಮುಗಳಖೋಡ ಮಠದಲ್ಲಿ ಒಟ್ಟು ಮೂರು ದಾಖಲೆಗಳು ನಿರ್ಮಾಣವಾದಂತಾಗುತ್ತದೆ.
– ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ