ಸದ್ದು ಕೇಳಿ ಬಾಗಿಲು ತೆರೆದರೆ ಮನೆಯೊಳಗೆ ನುಗ್ಗಿದ್ದು ಚಿರತೆ!
Team Udayavani, Jan 21, 2018, 6:00 AM IST
ತುಮಕೂರು: ಚಿರತೆಯೊಂದು ಮನೆಯೊಳಕ್ಕೆ ಸೇರಿಕೊಂಡು ಮನೆಯಲ್ಲಿದ್ದ ಅತ್ತೆ-ಸೊಸೆ ಬಚ್ಚಲ ಮನೆಯಲ್ಲಿ ಅವಿತುಕೊಂಡು ಪ್ರಾಣ ಉಳಿಸಿಕೊಂಡಿರುವ ಘಟನೆ ತುಮಕೂರಿನ ಜಯನಗರ ಬಡಾವಣೆಯಲ್ಲಿ ಶನಿವಾರ ನಡೆದಿದೆ.
ಹೌದು, ಊರಿನವರ ಎದೆಯಲ್ಲಿ ಡವಡವ. ಬೆಳಗ್ಗೆ 9.30ರ ಸಮಯ. ಚುಮುಚುಮು ಚಳಿಯ ನಡುವೆ ಬೆಚ್ಚಗೆ ಮನೆಯೊಳಗೆ ಕುಳಿತಿದ್ದ ವಿನುತಾಗೆ ಮನೆಯ ಗೇಟ್ ಬಡಿದ ಸದ್ದು. ಹೊರಬಂದು ಬಾಗಿಲು ತೆರೆದರೆ ಚಿರತೆಯೊಂದು ಮೈಮೇಲೆ ಎರಗುತ್ತಿದೆಯೇನೋ ಎನ್ನುವಂತೆ ಒಳನುಗ್ಗಿಯೇಬಿಟ್ಟಿತು. ಗಾಬರಿಯಾದ ವಿನುತಾ ಕಿರುಚಾಡುತ್ತಾ ಮನೆಯೊಳಗೆ ಓಡಿದ್ದಾಳೆ.
ಇತ್ತ, ಅಲ್ಲೇ ಪಕ್ಕದಲ್ಲಿ ನಿಂತಿದ್ದ ಆಕೆಯ ಮಾವ ರಂಗನಾಥ್ ಚಿರತೆ ನೋಡಿ ಬೆಚ್ಚಿಬಿದ್ದಿದ್ದಾರೆ. ಚಿರತೆ, ಚಿರತೆ… ಓಡಿ ಹೋಗಿ ಮನೆ ಬಾಗಿಲು ಹಾಕಿಕೋ… ಎಂದು ಸೊಸೆಗೆ ಹೇಳುತ್ತಾ ಹೊರಗಡೆ ಓಡಿದರು. ವಿನುತಾ ಅವರು ಮನೆಯೊಳಗಿನ ಬಚ್ಚಲ ಮನೆಯ ಬಾಗಿಲು ಬಡಿದು, ಸ್ನಾನ ಮಾಡುತ್ತಿದ್ದ ಆಕೆಯ ಅತ್ತೆ ವನಜಾಕ್ಷಿ ಅವರನ್ನೂ ಹೊರ ಹೋಗದಂತೆ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಇಷ್ಟಾದರೂ ತೀವ್ರ ಭಯದಿಂದ ಒಳ ಸೇರಿಕೊಂಡಿದ್ದ ಅತ್ತೆ-ಸೊಸೆಯನ್ನು ಚಿರತೆ ಒಳಕ್ಕೆ ಇರುವ ಕಾರಣ ಗೋಡೆ ಒಡೆದು ಹೊರಕ್ಕೆ ಕರೆದುಕೊಳ್ಳಲಾಯಿತು.
ಅಡುಗೆ ಮನೆ ಸಜ್ಜ ಸೇರಿದ್ದ ಚಿರತೆ
ನಿರ್ಮಾಣ ಹಂತದ ಕಟ್ಟಡದಲ್ಲಿ ಕುಳಿತಿದ್ದ ಚಿರತೆ ಜನರ ಸದ್ದ ಕೇಳಿ ಗಾಬರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಗೋವಿಂದರಾಜ್ ಎಂಬುವರನ್ನು ಗಾಯಗೊಳಿಸಿ ಬಳಿಕ ಮನೆಯೊಳಗೆ ನುಗ್ಗಿತ್ತು. ಇಷ್ಟೆಲ್ಲಾ ಘಟನೆ ಬಳಿಕ ರಂಗನಾಥ್ ಅವರು ಅರಣ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಜ್ಞರು ಸತತ 9 ತಾಸುಗಳ ಕಾರ್ಯಾಚರಣೆ ಬಳಿಕ ಅದನ್ನು ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
MUST WATCH
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’