ರಕ್ಕಸನಂತೆ ಮಗನ ಮೇಲೆ ಹಲ್ಲೆ ಮಾಡಿದ ಪಾಪಿ ತಂದೆ ಸೆರೆ
Team Udayavani, Jan 27, 2018, 3:55 PM IST
ಬೆಂಗಳೂರು: ಸ್ವಂತ ಮಗನನ್ನು ಚೆಂಡಿನಂತೆ ಎಸೆದು, ಬೆಡ್ ಮೇಲೆ ದಿಂಬು ಎಸೆದಂತೆ ಎಸೆದು ಕಾಲಿನಿಂದ ತುಳಿದು ಅಮಾನವೀಯವಾಗಿ ರಕ್ಕಸನಂತೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಕೆಂಗೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಂಗೇರಿಯ ಗ್ಲೋಬಲ್ ವಿಲೇಜ್ ಬಳಿ ಘಟನೆ ನೆಡೆದಿದ್ದು, ಸುಳ್ಳು ಹೇಳಿದ ಎಂಬ ಕಾರಣಕ್ಕೆ ಮಹೇಂದ್ರ ಎಂಬಾತ ತನ್ನ 11 ವರ್ಷದ ಮಗನ ಮೇಲೆ ಮಾರಣಾಂತಿಕ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾನೆ. ಕೃತ್ಯವನ್ನು ಆತನ ಪತ್ನಿ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾಳೆ.
ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್
ಸುಳ್ಳು ಹೇಳಿದ ಎಂಬ ಕಾರಣಕ್ಕೆ ಹೊಡೆದ ವಿಡಿಯೋವನ್ನು ಇನ್ನೊಮ್ಮೆ ಸುಳ್ಳು ಹೇಳಿದರೆ ಮತ್ತೆ ಮಗನಿಗೆ ತೋರಿಸುವ ಸಲುವಾಗಿ ನಾನೇ ವಿಡಿಯೋ ಚಿತ್ರೀಕರಿಸಲು ಹೇಳಿದ್ದೆ ಎಂದು ಮಹೇಂದ್ರ ಹೇಳಿಕೊಂಡಿದ್ದಾನೆ.
ಮೊಬೈಲ್ ಹಾಳಾಗಿ ವಿಡಿಯೋ ಬಯಲಾಯಿತು!
ಹಾಳಾದ ಮೊಬೈಲನ್ನು ರಿಪೇರಿಗೆಂದು ಕೊಟ್ಟಾಗ ಕ್ಯಾಶ್ ಕ್ಲಿಯರ್ ಮಾಡುವಾಗ ವಿಡಿಯೋವನ್ನು ನೋಡಿ ಸಾಮಾಜಿಕ ತಾಣಗಳಲ್ಲಿ ಹಾಕಿ ವೈರಲ್ ಆಗುವಂತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪತಿಯ ಕೃತ್ಯವನ್ನು ಪತ್ನಿ ಪೊಲೀಸರ ಮುಂದೆ ಸಮರ್ಥಿಸಿಕೊಂಡಿದ್ದಾಳೆ.
ಪೊಲೀಸರು ವಿಡಿಯೋ ನೋಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಂದ್ರನನ್ನು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ