ರಕ್ಕಸನಂತೆ ಮಗನ ಮೇಲೆ ಹಲ್ಲೆ ಮಾಡಿದ ಪಾಪಿ ತಂದೆ ಸೆರೆ
Team Udayavani, Jan 27, 2018, 3:55 PM IST
ಬೆಂಗಳೂರು: ಸ್ವಂತ ಮಗನನ್ನು ಚೆಂಡಿನಂತೆ ಎಸೆದು, ಬೆಡ್ ಮೇಲೆ ದಿಂಬು ಎಸೆದಂತೆ ಎಸೆದು ಕಾಲಿನಿಂದ ತುಳಿದು ಅಮಾನವೀಯವಾಗಿ ರಕ್ಕಸನಂತೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಕೆಂಗೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಂಗೇರಿಯ ಗ್ಲೋಬಲ್ ವಿಲೇಜ್ ಬಳಿ ಘಟನೆ ನೆಡೆದಿದ್ದು, ಸುಳ್ಳು ಹೇಳಿದ ಎಂಬ ಕಾರಣಕ್ಕೆ ಮಹೇಂದ್ರ ಎಂಬಾತ ತನ್ನ 11 ವರ್ಷದ ಮಗನ ಮೇಲೆ ಮಾರಣಾಂತಿಕ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾನೆ. ಕೃತ್ಯವನ್ನು ಆತನ ಪತ್ನಿ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾಳೆ.
ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್
ಸುಳ್ಳು ಹೇಳಿದ ಎಂಬ ಕಾರಣಕ್ಕೆ ಹೊಡೆದ ವಿಡಿಯೋವನ್ನು ಇನ್ನೊಮ್ಮೆ ಸುಳ್ಳು ಹೇಳಿದರೆ ಮತ್ತೆ ಮಗನಿಗೆ ತೋರಿಸುವ ಸಲುವಾಗಿ ನಾನೇ ವಿಡಿಯೋ ಚಿತ್ರೀಕರಿಸಲು ಹೇಳಿದ್ದೆ ಎಂದು ಮಹೇಂದ್ರ ಹೇಳಿಕೊಂಡಿದ್ದಾನೆ.
ಮೊಬೈಲ್ ಹಾಳಾಗಿ ವಿಡಿಯೋ ಬಯಲಾಯಿತು!
ಹಾಳಾದ ಮೊಬೈಲನ್ನು ರಿಪೇರಿಗೆಂದು ಕೊಟ್ಟಾಗ ಕ್ಯಾಶ್ ಕ್ಲಿಯರ್ ಮಾಡುವಾಗ ವಿಡಿಯೋವನ್ನು ನೋಡಿ ಸಾಮಾಜಿಕ ತಾಣಗಳಲ್ಲಿ ಹಾಕಿ ವೈರಲ್ ಆಗುವಂತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪತಿಯ ಕೃತ್ಯವನ್ನು ಪತ್ನಿ ಪೊಲೀಸರ ಮುಂದೆ ಸಮರ್ಥಿಸಿಕೊಂಡಿದ್ದಾಳೆ.
ಪೊಲೀಸರು ವಿಡಿಯೋ ನೋಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಂದ್ರನನ್ನು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ