ವಧು,ವರ ಎಸ್ಕೇಪ್ ! ಕೋಲಾರದಲ್ಲಿ ಮುರಿದು ಬಿದ್ದ ಮದುವೆ
Team Udayavani, Jan 28, 2018, 9:42 AM IST
ಕೋಲಾರ: ಸಾಮಾನ್ಯವಾಗಿ ವಧು ನಾಪತ್ತೆಯಾಗಿ ಮದುವೆ ಮುರಿದು ಬೀಳುವ ಪ್ರಸಂಗಗಳು ಅಲ್ಲೊಮ್ಮೆ ಇಲ್ಲೊಮ್ಮೆ ನಡೆಯುತ್ತದೆ.ಆದರೆ ಕೋಲಾರದಲ್ಲಿ ವಧು, ವರ ಇಬ್ಬರೂ ನಾಪತ್ತೆಯಾಗಿ ಭಾನುವಾರ ನಡೆಯಬೇಕಿದ್ದ ಅದ್ಧೂರಿ ಮದುವೆಯೆ ಮುರಿದು ಬಿದ್ದಿದೆ.
ಬಂಗಾರಪೇಟೆಯ ನೇರ್ನಳ್ಳಿಯ ಎನ್ . ಸೌಮ್ಯ ಎಂಬಾಕೆಗೆ ಮಾಲೂರಿನಚನ್ನಕಲ್ಲಿನ ನಿವಾಸಿ ಸಿ.ಎಂ.ಗುರೇಶ್ ಜೊತೆ ವಿವಾಹ ನೆರವೇರಬೇಕಿತ್ತು. ಶನಿವಾರ ಸಂಜೆ ಇದ್ದಕ್ಕಿದ್ದಂತೆ ವಧು ಸೌಮ್ಯ ನಾಪತ್ತೆಯಾಗಿದ್ದಾಳೆ.
ವಧು ನಾಪತ್ತೆಯಾದ ಬೆನ್ನಲ್ಲೇ ವರ ಗುರೇಶ್ ಮತ್ತು ಸೌಮ್ಯ ಕಡೆಯವರು ಮದುವೆ ಮುರಿದು ಬೀಳಬಾರದು ಎಂದು ಬೇರೆ ಹುಡುಗಿಯೊಂದಿಗೆ ರಾತ್ರೋ ರಾತ್ರಿ ಮದುವೆ ನಿಗದಿ ಮಾಡಿದ್ದಾರೆ. ಸೌಮ್ಯ ಚಿಕ್ಕಪ್ಪನ ಪುತ್ರಿ ವೆಂಕಟರತ್ನಮ್ಮ ಳೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ.
ಮದುವೆಗೆ ಒಪ್ಪಿದ್ದ ವರ ಗುರೇಶ್ ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ.
ವಧು,ವರ ಇಬ್ಬರೂ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಸಾವಿರಾರು ಜನರ ಔತಣಕ್ಕಾಗಿ ಮಾಡಿದ್ದ ಊಟ ವ್ಯರ್ಥವಾಗಿದೆ. ಮದುವೆಗಾಗಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ನೂರಾರು ಸಂಬಂಧಿಕರು ಬೇಸರದಿಂದ ಮನೆಗೆ ವಾಪಾಸ್ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ