ಬಾಂಬ್ ಸ್ಫೋಟ:ಯೋಧ ಹುತಾತ್ಮ
Team Udayavani, Feb 14, 2018, 8:23 AM IST
ಹರಿಹರ: ರಾಜಸ್ಥಾನದ ಪೋಖಾನ್ ಸಮೀಪ ಸೇನಾ ತರಬೇತಿ ಶಿಬಿರದಲ್ಲಿ ಅಭ್ಯಾಸ ನಿರತರಾಗಿದ್ದ ವೇಳೆ ಸಂಭವಿಸಿದ ಆಕಸ್ಮಿಕ ಬಾಂಬ್ ಸ್ಫೋಟದಲ್ಲಿ ಹರಿಹರದ ಯೋಧ ಅಬ್ದುಲ್ ಜಾವಿದ್ (32) ಮೃತಪಟ್ಟಿದ್ದಾರೆ. ನಗರದ ದಾವಣಗೆರೆ ರಸ್ತೆ ಲಾಲ್ಬೇಗ್ಸಾಬ್ ಬಿಲ್ಡಿಂಗ್ ಸಮೀಪದ ಗುಜರಿ ವ್ಯಾಪಾರಿ ಅಬ್ದುಲ್ ಖಾದರ್, ಫಾತಿಮಾ ಬಿ ದಂಪತಿಯ ಐವರು ಮಕ್ಕಳಲ್ಲಿ 2ನೇಯವರಾದ ಅಬ್ದುಲ್ ಜಾವಿದ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಬೆಂಗಳೂರು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನ 14ನೇ ಇಂಜಿನಿಯರ್ ರೆಜಿಮೆಂಟ್ನಲ್ಲಿ ನಾಯಕ್ ಆಗಿದ್ದ ಜಾವಿದ್ ಇತ್ತೀಚೆಗಷ್ಟೇ ವಿಶೇಷ ತರಬೇತಿ ಗೆಂದು ರಾಜಸ್ಥಾನದ ಪೋಖಾನ್ಗೆ ತೆರಳಿದ್ದರು. ಸೇನೆಯ ಅಧಿಕಾರಿಗಳು ಸೋಮವಾರ ರಾತ್ರಿ ಕುಟುಂಬದವರಿಗೆ ಕರೆ ಮಾಡಿ ಬಾಂಬ್ ಸ್ಫೋಟದಲ್ಲಿ ಜಾವಿದ್ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಇವರ ಪಾರ್ಥಿವ ಶರೀರ
ಜೋಧಪುರದ ಮಿಲಿಟರಿ ಆಸ್ಪತ್ರೆಯಿಂದ ವಿಮಾನದ ಮೂಲಕ ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಬರಲಿದ್ದು, ರಾತ್ರಿ ವೇಳೆಗೆ ಹರಿ
ಹರಕ್ಕೆ ತಲುಪುವ ನಿರೀಕ್ಷೆಯಿದೆ. ಗುರುವಾರ ಅಂತಿಮ ಸಂಸ್ಕಾರ ನಡೆಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್