24ಕ್ಕೆ ಶಾಸಕರಿಗೆ ಶ್ರವಣಬೆಳಗೊಳ ಟೂರ್
Team Udayavani, Feb 22, 2018, 6:30 AM IST
ಬೆಂಗಳೂರು: ಬಾಹುಬಲಿಗೆ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಫೆ. 24 ರಂದು ಶ್ರವಣಬೆಳಗೊಳಕ್ಕೆ ಶಾಸಕರನ್ನು ಕರೆದುಕೊಂಡು ಹೋಗಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಸ್ಪೀಕರ್ ಕೆ.ಬಿ.ಕೋಳಿವಾಡ ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದು, ಕಾರ್ಯಕ್ರಮಕ್ಕೆ ಅಂದು ಬೆಳಿಗ್ಗೆ ಶಾಸಕರ ಭವನದಿಂದ ಬಸ್ ಮೂಲಕ ಕರೆದುಕೊಂಡು ಹೋಗಿ ವಾಪಸ್ ಬರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು