ಮತದಾನ ಅವಧಿ ಹೆಚ್ಚಳ, ಚುನಾವಣೆ ಬಹಿಷ್ಕರಿಸುವವರ ವಿರುದ್ಧ ಕ್ರಮ
Team Udayavani, Feb 22, 2018, 4:00 PM IST
ಬೆಂಗಳೂರು : 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಶಾಂತಿಯುತ ಮತದಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್ ಹೇಳಿದ್ದಾರೆ.
ಈ ಬಾರಿ ಮತದಾನದ ಅವಧಿಯನ್ನು ಹೆಚ್ಚಿಸಲಾಗುವುದು; ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ; ಮತದಾನ ಬಹಿಷ್ಕರಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಕೊಳ್ಳಲಾಗುವುದು ಎಂದು ವಿ ಶಂಕರ್ ಮಾಧ್ಯಮಕ್ಕೆ ತಿಳಿಸಿದರು.
2018ರ ವಿಧಾನಸಭಾ ಚುನಾವಣೆಗೆ ಲಾಂಛನವನ್ನು ರೂಪಿಸಲಾಗಿದ್ದು ಅದರ ಬಿಡುಗಡೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್ ನೆರವೇರಿಸಿದರು.