ಒಡೆಯರ್ರಿಂದ ಮಂದಸ್ಮಿತನ ಮಸ್ತಕಾಭಿಷೇಕ
Team Udayavani, Feb 24, 2018, 8:15 AM IST
ಹಾಸನ: ಮಹಾಮಸ್ತಕಾಭಿಷೇಕದ 7ನೇ ದಿನವಾದ ಶುಕ್ರವಾರ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶ್ರವಣಬೆಳಗೊಳದ ವಿಂಧ್ಯಗಿರಿಯನ್ನೇರಿ ವೈರಾಗ್ಯಮೂರ್ತಿಗೆ ಅಭಿಷೇಕ ನೆರವೇರಿಸಿದರು. ವಿಂಧ್ಯಗಿರಿಯ ವಿಐಪಿ ಪ್ರವೇಶ ದ್ವಾರದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೆಟ್ಟಿಲುಗಳ ಮೂಲಕ ಬಾಹುಬಲಿ ಮೂರ್ತಿಯ ಸನ್ನಿಧಿಗೆ ತಲುಪಿದ ಅವರನ್ನು
ಶ್ರವಣಬೆಳಗೊಳದ ಜೈನ ಮಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ವಾಗತಿಸಿದರು. ಬಳಿಕ, ಬಾಹುಬಲಿ ಮೂರ್ತಿಗೆ ಜಲಾಭಿಷೇಕ ನೆರವೇರಿಸಲು ಸಹಕರಿಸಿದರು.
ನಂತರ ಕೆಲಹೊತ್ತು ವಿಂಧ್ಯಗಿರಿಯ ಮೇಲೆಯೇ ಕುಳಿತು ಜಲಾಭಿಷೇಕ ವೀಕ್ಷಣೆ ಮಾಡಿ ಅಪರೂಪದ ಸನ್ನಿವೇಶವನ್ನು
ಕಣ್ತುಂಬಿಕೊಂಡರು. ಮೆಟ್ಟಿಲುಗಳ ಮೂಲಕ ಬೆಟ್ಟ ಏರಿ-ಇಳಿದ ಯದುವೀರ ಅವರು, ತಮಗೆ ಇದೊಂದು ವಿಶೇಷ ಅನುಭವ ಎಂದು ಸಂತಸ ಹಂಚಿಕೊಂಡರು. ಬಹಳ ಹಿಂದಿನಿಂದಲೂ ಮೈಸೂರಿನ ರಾಜವಂಶ ಮತ್ತು ಶ್ರವಣಬೆಳಗೊಳ ನಡುವೆ ಅವಿನಾಭಾವ ಸಂಬಂಧ ಇದೆ. ಚಿಕ್ಕದೇವರಾಜ ಒಡೆಯರ್ ಶ್ರವಣಬೆಳಗೊಳದ ಕಲ್ಯಾಣಿಯನ್ನು ನಿರ್ಮಿಸಿ ಶ್ರವಣಬೆಳಗೊಳಕ್ಕೆ ಕೊಡುಗೆ ನೀಡಿದ್ದರು ಎಂದರು.
ಮೂರನೇ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್, ತಾತ ಜಯ ಚಾಮರಾಜೇಂದ್ರ ಒಡೆಯರ್ ಹಾಗೂ ತಮ್ಮ ತಂದೆಯವರು ಮಸ್ತಕಾಭಿಷೇಕದಲ್ಲಿ ಭಾಗಿಯಾಗಿದ್ದರು. ಆ ಸಂಬಂಧಹೀಗೆಯೇ ಮುಂದುವರಿಯಬೇಕೆಂಬ ಆಶಯದಿಂದ ತಾವೂ ಕೂಡ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದೇನೆ. ಈ ಸನ್ನಿವೇಶ ತಮಗೆ ಖುಷಿ ಕೊಟ್ಟಿದೆ ಎಂದರು.
ಪ್ರಮೋದಾದೇವಿಯವರು ಮಸ್ತಕಾಭಿಷೇಕದಲ್ಲಿ ಭಾಗಿಯಾಗುವ ವಿಚಾರವನ್ನು ತಾವು ಖಚಿತಪಡಿಸಿಕೊಂಡಿಲ್ಲ. ತಮ್ಮ ಸುಪುತ್ರನ ನಾಮಕರಣ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆ ದಿನಾಂಕವನ್ನು ಪ್ರಮೋದಾದೇವಿಯವರು ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಜೈನಕಾಶಿಗೆ ನಾಳೆ ರಾಜನಾಥ್
ಹಾಸನ: ಕೇಂದ್ರ ಗೃಹಮಂತ್ರಿ ರಾಜನಾಥ್ಸಿಂಗ್ ಅವರು ಫೆ.25 ರಂದು ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ 88ನೇ ಮಹಾಮಸ್ತಾಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಶ್ರವಣಬೆಳಗೊಳದ ಹೆಲಿಪ್ಯಾಡ್ಗೆ ಆಗಮಿಸಲಿದ್ದು,
ಮಧ್ಯಾಹ್ನ 2 ಗಂಟೆಗೆ ಬಾಹುಬಲಿ ಮೂರ್ತಿಯ ಮಹಾಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು