ಕೇಂದ್ರ ಸರ್ಕಾರಕ್ಕೆ ಶಿಫಾರಸು: ಸಿಎಂ
Team Udayavani, Mar 20, 2018, 6:05 AM IST
ಕೊಪ್ಪಳ: ಲಿಂಗಾಯತ ಮತ್ತು ಬಸವ ತತ್ವದಲ್ಲಿ ನಂಬಿಕೆ ಇದ್ದವರಿಗಾಗಿ ಪ್ರತ್ಯೇಕ ಧರ್ಮ ನೀಡಬಹುದು ಎಂಬ ನ್ಯಾ.ನಾಗ ಮೋಹನ ದಾಸ್ ಸಮಿತಿ ವರದಿ ಶಿಫಾರಸಿನ ಅನ್ವಯ ಪ್ರತ್ಯೇಕ ಧರ್ಮ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಪ್ಪಳ ಸಮೀಪದ ಬಸಾಪುರ ಲಘು ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಧರ್ಮ ಸ್ಥಾಪನೆ ಕುರಿತು ಸೆಕ್ಷನ್ 2(ಡಿ) ಮೈನಾರಿಟಿ ಕಮಿಷನ್ ಆ್ಯಕ್ಟ್ನಡಿ ಶಿಫಾರಸು ಮಾಡಲಾಗುವುದು. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುವ ವೇಳೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ನಾವಂತೂ ಕೇಂದ್ರಕ್ಕೆ ಪ್ರತ್ಯೇಕ ಧರ್ಮ ಸ್ಥಾಪನೆ ಕುರಿತು ಶಿಫಾರಸು ಮಾಡಲಿದ್ದೇವೆ. ನಿರ್ಧಾರ ಕೇಂದ್ರಕ್ಕೆ ಬಿಟ್ಟಿದ್ದು, ಕೇಂದ್ರವೂ ಸ್ಪಂದಿಸುವ ವಿಶ್ವಾಸವಿದೆ ಎಂದರು.