ಗಳಗಳನೇ ಕಣ್ಣೀರಿಟ್ಟ ನಮೋಶಿ, ನಾಡಿದ್ದು 3ನೇ ಪಟ್ಟಿ ಬಿಡುಗಡೆ: BSY
Team Udayavani, Apr 16, 2018, 6:44 PM IST
ಕಲಬುರಗಿ/ಬೆಂಗಳೂರು:ಪಕ್ಷದಲ್ಲಿ ನನ್ನ ಅನುಭವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಭಾರತೀಯ ಜನತಾ ಪಕ್ಷದ ಮಾಜಿ ಎಂಎಲ್ ಸಿ ಶಶೀಲ್ ನಮೋಶಿ ಗಳಗಳನೆ ಕಣ್ಣೀರಿಟ್ಟ ಪ್ರಸಂಗ ಸೋಮವಾರ ನಡೆದಿದೆ.
ಇಂದು ಬಿಜೆಪಿಯ 2ನೇ ಹಂತದ ಪಟ್ಟಿ ಬಿಡುಗಡೆಯಾಗಿದ್ದು, ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಶಶೀಲ್ ನಮೋಶಿ ಅವರ ಹೆಸರು ಕೈಬಿಡಲಾಗಿತ್ತು. ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕಾಗಿ ನೊಂದು ಶಶೀಲ್ ನಮೋಶಿ ಕಣ್ಣೀರಿಟ್ಟ ಘಟನೆ ನಡೆಯಿತು.
ನಾಳೆ ಅಥವಾ ನಾಡಿದ್ದು 3ನೇ ಪಟ್ಟಿ ಬಿಡುಗಡೆ: ಯಡಿಯೂರಪ್ಪ
ನಾಳೆ ಅಥವಾ ನಾಡಿದ್ದು 3ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಅಲ್ಲದೇ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರಿಸಿಕೊಂಡಿರುವ ಶಶೀಲ್ ನಮೋಶಿ ಕುರಿತು ಕೇಳಿದ ಪ್ರಶ್ನೆಗೆ, ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಅಸಮಾಧಾನ ಸಹಜ. ಆದರೆ ಶಶೀಲ್ ನಮೋಶಿಗೆ ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಸೂಕ್ತ ಹೊಣೆಗಾರಿಕೆ ಕೊಡಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.