ಮೋದಿಜೀ, ಭ್ರಷ್ಟರಿಗೇಕೆ ಟಿಕೆಟ್‌ ನೀಡಿದ್ರಿ ?


Team Udayavani, May 10, 2018, 6:00 AM IST

rahul-gandhi-interview.jpg

ಬೆಂಗಳೂರು: ರಾಜ್ಯವಿಧಾನ ಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಎರಡು ಬಾರಿ ರಾಜ್ಯ ಸುತ್ತಿ ಜನರ ನಾಡಿ ಮಿಡಿತ ಅರಿತಿದ್ದಾರೆ. ಅಲ್ಲದೆ ಕರ್ನಾಟಕದ ಫ‌ಲಿತಾಂಶದಿಂದ ದೇಶದ ಭವಿಷ್ಯದ ಮೇಲಾಗುವ ಪರಿಣಾಮ ಹಾಗೂ ರಾಜ್ಯದ ಜನತೆಯ ಉದಾರ ಪ್ರೀತಿಯ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.

ಎರಡು ಬಾರಿ ರಾಜ್ಯ ಸುತ್ತಿದ್ದೀರಿ. ಜನರ ಪ್ರತಿಕ್ರಿಯೆ ಹೇಗಿದೆ ?
                 ಜನತೆಯ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ರಾಜ್ಯವನ್ನು ಆಳವಾಗಿ ಸುತ್ತುವಾಗ ಜನತೆಯ ಭಾವನೆಗಳನ್ನು ಅರಿಯುವ ಪ್ರಯತ್ನ ನಡೆಸಿದೆ. ಕರ್ನಾಟಕದ ಜನತೆ ಬಸವಣ್ಣನ ತತ್ವಗಳೊಂದಿಗೆ ಹೇಗೆ ಬೆರೆತುಕೊಂಡಿದ್ದಾರೆ ಎನ್ನುವುದನ್ನು  ತಿಳಿದುಕೊಂಡೆ. ಬಸವಣ್ಣ ಮಹಾ ಮಾನವತಾವಾದಿ. ಆದರೆ, ನನಗೆ ಅವರ ತತ್ವಗಳು ಸರಿಯಾಗಿ ಪಾಲನೆಯಾಗಿಲ್ಲ ಎನಿಸಿತು.

ಬಸವಣ್ಣ ರಾಜ್ಯದ ಜನತೆಯ ರಕ್ತದಲ್ಲಿ ಇದ್ದಾರೆ. ಇಲ್ಲಿನ ಜನತೆ ಬೇರೆ ಜನರ ಭಾವನೆಗಳನ್ನು ಸ್ವೀಕರಿಸುವ ಮನೊಭಾವ ಹೊಂದಿದ್ದಾರೆ.  ಸಹೋದರತ್ವ ಭಾವನೆ ಹೊಂದಿದ್ದಾರೆ. ಜನ ಅತ್ಯಂತ ಖುಷಿಯಾಗಿದ್ದಾರೆ. ಹೊಸ ಚಿಂತನೆಗಳನ್ನು ಸ್ವೀಕರಿಸುತ್ತಾರೆ. ಬೇರೆಯವರ ಆಲೋಚನೆಗಳನ್ನು ನಾಶ ಮಾಡಲು ಬಯಸುವುದಿಲ್ಲ. ಅದಕ್ಕೆ  ಬೆಂಗಳೂರು ಜಗತ್ತಿನ  ಎರಡನೇ ಸಿಲಿಕಾನ್‌ ವ್ಯಾಲಿಯಾಗಿದೆ. ಇನ್ನು ಹದಿನೈದು ವರ್ಷದಲ್ಲಿ ಬೆಂಗಳೂರು ಜನಗತ್ತಿನ ಮೊದಲನೇ ಸ್ಥಾನದಲ್ಲಿರಲಿದೆ. ಆ ನಂಬಿಕೆ ನನಗಿದೆ.

ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ನೀವೇನು ಹೇಳುವಿರಿ ?
              ಬಿಜೆಪಿಯವರು ಯಾವಾಗಲೂ ಕೇಂದ್ರಿಕೃತ ಅಜೆಂಡಾ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಎಲ್ಲವೂ ತಾವು ಹೇಳಿದಂತೆ ನಡೆಯಬೇಕೆಂಬ ಮನೋಭಾವ ಅವರದು. ಬಸವಣ್ಣನ ಕರ್ನಾಟಕ ಮುಕ್ತ, ತಮಿಳುನಾಡು ಮುಕ್ತ, ಪಂಜಾಬ್‌ ಮುಕ್ತ, ಒಡಿಶಾ ಮುಕ್ತ ಆಗಬೇಕೆನ್ನುತ್ತಾರೆ. ಅವರಿಗೆ ದೇಶದ ವೈವಿಧ್ಯತೆಯಲ್ಲಿ ನಂಬಿಕೆಯಿಲ್ಲ. ಯಾವ ರಾಜ್ಯವೂ ತನ್ನದೇ ಅಸ್ಮಿತೆ ಹೊಂದಬಾರದು ಎನ್ನುವುದು ಅವರ ಅಭಿಪ್ರಾಯ.ಅವರು ಕನ್ನಡ, ತಮಿಳು, ಭಾಷೆ, ಸಂಸ್ಕೃತಿ ಇರಬೇಕೆಂದು ಬಯುಸುವುದಿಲ್ಲ. ಅವರು ಎಲ್ಲವನ್ನು ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರಲು ಬಯಸುತ್ತಾರೆ. ನಾವು ಪ್ರಾದೇಶಿಕ ಭಾಷೆ, ಸಂಸ್ಕೃತಿ ಎಲ್ಲವೂ ಇರಬೇಕೆಂದು ಬಯಸುತ್ತೇವೆ.

ಮೋದಿ ಮಾದರಿಯ ಅಭಿವೃದ್ಧಿ ಬಗ್ಗೆ ಏನು ಹೇಳುತ್ತಿರಿ ?
             ನಾನು ನಿಮಗೆ ಎರಡು ಉದಾಹರಣೆ ನೀಡುತ್ತೇನೆ. ನರೇಂದ್ರ ಮೋದಿ ತಮ್ಮದೇ ಆದ ಅಜೆಂಡಾ ಇಟ್ಟುಕೊಂಡಿದ್ದಾರೆ. ಮೋದಿ ಬುಲೆಟ್‌ ಟ್ರೇನ್‌ ಐಡಿಯಾ ತೆಗೆದುಕೊಂಡು ಬಂದಿದ್ದಾರೆ. ಅದನ್ನು ಜನರ ಮೇಲೆ ಹೇರಲು ಬಯಸುತ್ತಾರೆ. ಅದಕ್ಕೆ 1 ಲಕ್ಷ ಕೋಟಿ ಹಣ ಹೂಡಲು ಮುಂದಾಗಿದ್ದಾರೆ. ಅದರ ಬದಲು ರೈಲು ಅಭಿವೃದ್ಧಿಗೆ ಹಾಕಿದ್ದರೆ ಸಾಮಾನ್ಯ ಜನರಿಗೆ ಅನುಕೂಲವಾಗುತ್ತಿತ್ತು.  ಬುಲೆಟ್‌ ಟ್ರೇನ್‌ನಿಂದ ಜಪಾನಿಗರು ಉದ್ಯೋಗ ಸೃಷ್ಠಿಸಿಕೊಳ್ಳುತ್ತಾರೆ. ಅವರಿಗೆ ಲಾಭವಾಗುತ್ತದೆ. ಇದರ ಹಿಂದೆ ಅವರ ಅಜೆಂಡಾ ಏನಿದೆಯೋ ಗೊತ್ತಿಲ್ಲ. ಇದು ಜನರ ಮೇಲೆ ಹೇರುವ ಅಭಿವೃದ್ಧಿ ಮಾದರಿ.

2019 ಕ್ಕೆ ನಿಮ್ಮ ಅಜೆಂಡಾ ಏನು ?
            ಈಗ ಕರ್ನಾಟಕ ಚುನಾವಣೆ ನಡೆಯುತ್ತಿದೆ. ಈಗ ನಾನು 2019 ರ ಚುನಾವಣೆಯ ಬಗ್ಗೆ ಹೇಳುವುದು ಸರಿಯಲ್ಲ ಆದರೆ, ದೇಶಾದ್ಯಂತ ನರೇಂದ್ರ ಮೋದಿಯ ಆಡಳಿತ ವೈಖರಿಯನ್ನು ದೇಶದ ಜನತೆ ವಿರೋಧಿಸುತ್ತಿದಾರೆ. ಆರ್‌ಎಸ್‌ಎಸ್‌ ಎಲ್ಲ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುವುದನ್ನು ವಿರೋಧಿಸುತ್ತಿದ್ದಾರೆ. ಎಲ್ಲ ಪ್ರತಿಪಕ್ಷಗಳು ಮೋದಿ ವಿರುದ್ಧ ಒಂದಾಗಲು ಬಯಸುತ್ತಿವೆ.

ದೇಶಾದ್ಯಂತ ಕಾಂಗ್ರೆಸ್‌ ಯಾಕೆ ವೀಕ್‌ ಆಗಿದೆ ? ನಾಯಕತ್ವದಲ್ಲಿ ಏನಾದರೂ ಸಮಸ್ಯೆ ಇದೆ‌ಯಾ ?
            ನಾವು ಕೇಂದ್ರದಲ್ಲಿ ಡಾ. ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ್ದೇವೆ. ಆ ಸಮಯದಲ್ಲಿ ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ದೇವೆ. ನಾವು ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದೆವು. ತೈಲ ಬೆಲೆ ಈಗಿನ ಸರ್ಕಾರಕ್ಕಿಂತ ಕಡಿಮೆ ಇತ್ತು. ದೇಶದ ಜನತೆ ನಮ್ಮ ಬಗ್ಗೆ ಅಸಮಾಧಾನಗೊಂಡಿದ್ದರು. ನಾವು ಜನರ ಭಾವನೆಗಳನ್ನು ಗೌರವಿಸಿ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದೇವೆ. 

ಯುಪಿಎ ಅವಧಿಯಲ್ಲಿ ನೀವು ಯಾವ ತಪ್ಪುಗಳನ್ನು ಮಾಡಿದ್ದೀರಿ ?
           2004 ರಲ್ಲಿ ನಾವು ಕೆಲವು ಯೋಜನೆಗಳನ್ನು ಹಾಕಿಕೊಂಡು ಅಧಿಕಾರಕ್ಕೆ ಬಂದೆವು. ನರೆಗಾ, ಆರ್‌ಟಿಐ, ರೈತರ ಸಾಲ ಮನ್ನಾ, ವಿದ್ಯುದ್ದೀಕರಣ ಯೋಜನೆಗಳನ್ನು ಹಾಕಿಕೊಂಡಿದ್ದೆವು. ಆ ಯೋಜನೆಗಳ ದೂರದೃಷ್ಟಿ ಕೆಲಸ ಮಾಡಲಿಲ್ಲ. ಹೀಗಾಗಿ ನಾವು ಹೊಸ ಆಲೋಚನೆಗಳೊಂದಿಗೆ ದೇಶವನ್ನು ಮುಂದೆ ತೆಗೆದುಕೊಂಡು ಹೋಗಲು ಬಯಸುತ್ತೇವೆ. ಹೀಗಾಗಿ ಈಗ ಚುನಾವಣೆಗೆ ಜನರ ಅಭಿಪ್ರಾಯ ಪಡೆದು ಪ್ರಣಾಳಿಕೆ ರಚನೆ ಸಿದ್ದಪಡಿದ್ದೇವೆ. ಬಿಜೆಪಿಯವರು ಮೂದು ದಿನದಲ್ಲಿ ಪ್ರಣಾಳಿಕೆ ರಚಿಸಿದ್ದಾರೆ.

ಬಿಜೆಪಿಯವರು ಸಂವಿಧಾನ ಬದಲಾಯಿಸಲು ಅಧಿಕಾರಕ್ಕೆ ಬಂದಿರುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ನೀವೇನು ಹೇಳುತ್ತೀರಿ ?
           ಭಾರತದ ಸಂವಿಧಾನ ಆರ್‌ಎಸ್‌ಎಸ್‌ನವರನ್ನು ವಿಚಲಿತರನ್ನಾಗಿ ಮಾಡಿದೆ. ಅವರು ದೇಶದ ಎಲ್ಲರೂ ಸಮಾನ ಅವಕಾಶ ಪಡೆಯುವುದು ಬಯಸುವುದಿಲ್ಲ. ಬಿಜೆಪಿಯವರಿಗೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಬರೆದ ಸಂವಿಧಾನ ಮತ್ತು ಕಾಂಗ್ರೆಸ್‌ ಮಾಡಿರುವ ಬದಲಾವಣೆಯ ಬಗ್ಗೆ ನಂಬಿಕೆ ಇಲ್ಲ. ಸಮಾಜದ ಎಲ್ಲ ವರ್ಗದವರಿಗೆ ಸಮಾನತೆ ನೀಡುವುದು ಅವರಿಗೆ ಬೇಕಾಗಿಲ್ಲ. ದಲಿತರು, ಆದಿವಾಸಿಗಳು, ಇತರ ವರ್ಗದವರಿಗೆ ಸ್ವಾತಂತ್ರ್ಯ ನೀಡುವುದು ಅವರಿಗೆ ಬೇಕಾಗಿಲ್ಲ.

ಸಂವಿಧಾನ ಬದಲಾವಣೆಯಾಗದಷ್ಟು ಪರಿಪೂರ್ಣವಾಗಿದೆಯಾ?
           ಹಾಗಲ್ಲ ಅದು, ಸಂವಿಧಾನದಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ಬಿಜೆಪಿಯವರು ಸಂವಿಧಾನದ ಮೂಲ ಆಶಯವನ್ನೇ ಬದಲಾಯಿಸಲು ಹೊರಟಿದ್ದಾರೆ. ತಿದ್ದುಪಡಿ ಮತ್ತು ಬದಲಾವಣೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಸಂವಿಧಾನ ಬದಲಾಯಿಸುತ್ತೇನೆ ಎಂದು ಅವರ ಮಂತ್ರಿ ಹೇಳಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಮೌನವಾಗಿದ್ದಾರೆ. ಅಂದರೆ, ಬದಲಾವಣೆಗೆ ಅವರ ಒಪ್ಪಿಗೆ ಇದೆ ಎಂದರ್ಥ

ಕಾಂಗ್ರೆಸ್‌ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆಯೇ?
          ಖಂಡಿತವಾಗಿಯೂ ಇದೆ. ಸ್ಪ ಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಅದರಲ್ಲಿ ಅನುಮಾನವಿಲ್ಲ.

ಸಿದ್ದರಾಮಯ್ಯ ಜಾತಿ ಮತ್ತು ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರಲ್ಲಾ ?
          ದೇಶದಲ್ಲಿ ಧರ್ಮ ಹಾಗೂ ಜಾತಿಯ ಆಧಾರದಲ್ಲಿ ಜನರನ್ನು ಒಡೆಯುತ್ತಿರುವುದು ಬಿಜೆಪಿ. ಈ ದೇಶದಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲೆ ನಿರಂತರ ದಬ್ಟಾಳಿಕೆ ನಡೆಯುತ್ತಿದೆ. ಬಿಜೆಪಿ ದಲಿತರು, ಆದಿವಾಸಿಗಳು ಅಲ್ಪ ಸಂಖ್ಯಾತರನ್ನು ಹೊಡೆಯುವುದು, ಕೊಲ್ಲುವುದನ್ನು ಬಿಜೆಪಿ ಮಾಡುತ್ತಿದೆ.

ರಾಜ್ಯದಲ್ಲಿ ಲಿಂಗಾಯತ ಧರ್ಮ ಒಡೆದಿದ್ದಾರೆ ಎಂಬ ಆರೋಪ ಇದೆಯಲ್ಲಾ ?
          ಸಿದ್ದರಾಮಯ್ಯ ಅವರು ಲಿಂಗಾಯತ ಧರ್ಮವನ್ನು ಒಡೆದಿಲ್ಲ. ಲಿಂಗಾಯತ ಸಮುದಾಯದ ಜನರ ಭಾವನೆಗಳಿಗೆ ಸ್ಪಂದಿಸಿದ್ದಾರೆ. ಒಂದು ಸರ್ಕಾರವಾಗಿ ಅವರ ಬೇಡಿಕೆಗೆ ಸ್ಪಂದಿಸಿದೆ. ಅದರಲ್ಲಿ ಧರ್ಮ ಒಡೆಯುವ ಪ್ರಶ್ನೆ ಎಲ್ಲಿಂದ ಬಂತು. ಬಿಜೆಪಿ ಸಮುದಾಯಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ನೋಟು ಅಮಾನ್ಯ ಮಾಡಿ ಸಾಮಾನ್ಯ ಜನರ ಜೀವನ ಹಾಳು ಮಾಡಿದ್ದಾರೆ.
ಬಾಕ್ಸ್‌

ಸಿದ್ದರಾಮಯ್ಯ ಅವರದು 10 % ಸರ್ಕಾರ ಎಂದು ಮೋದಿ ಅಮಿತ್‌ ಶಾ ಹೇಳುತ್ತಿದ್ದಾರಲ್ಲಾ ?
          ಮೋದಿ ರಾಜ್ಯಕ್ಕೆ ಬಂದಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ದೇಶ ಎಂದೂ ಕೇಳರಿಯದ ಭಷ್ಟಾಚಾರ ಮಾಡಿ, ಜೈಲಿಗೆ ಹೋಗಿದ್ದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ 8 ಜನ ರೆಡ್ಡಿ ಆಪ್ತರಿಗೆ ಟಿಕೆಟ್‌ ನೀಡಿದ್ದಾರೆ. ರಾಜ್ಯದ ಜನತೆಯ 35 ಸಾವಿರ ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ.

ರೆಡ್ಡಿಗಳಿಗೆ ಯಾಕೆ ಟಿಕೆಟ್‌ ನೀಡಿದ್ದಾರೆ ಎಂದು ಮೋದಿ ಹೇಳಬೇಕು. ಕೊಲೆ ಆರೋಪ ಹೊತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಯಾಕೆ ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ತಿಳಿಸಬೇಕು. ಬಿಜೆಪಿ ನಾಯಕರಾಗಲು ಭ್ರಷ್ಟಾಚಾರ ಪ್ರಮುಖ ಮಾನದಂಡ ಆಗಿದೆಯೇ?

– ಶಂಕರ ಪಾಗೋಜಿ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

ಲೋಕಸಭಾ ಕಣದಲ್ಲಿ ನಾರಿಶಕ್ತಿ ಪ್ರದರ್ಶನ: ಕಾಂಗ್ರೆಸ್‌ನಿಂದ 6, ಬಿಜೆಪಿಯಿಂದ 2 ಮಹಿಳೆಯರು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.