ವಿಧಾನಸೌಧ ಸುತ್ತ ಭರ್ಜರಿ ಮಳೆ ;ಪ್ರಮಾಣ ವಚನ ಕಾರ್ಯಕ್ರಮ, ಪರದಾಟ
Team Udayavani, May 23, 2018, 2:42 PM IST
ಬೆಂಗಳೂರು: ವಿಧಾನಸೌಧದ ಸುತ್ತಮುತ್ತ ಮಂಗಳವಾರ ಮಧ್ಯಾಹ್ನ 2 ಗಂಟೆಯ ವೇಳೆ ಭರ್ಜರಿ ಮಳೆ ಸುರಿದು ಎಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ.
ವಿಧಾನಸೌಧದ ಮುಂಭಾಗದಲ್ಲಿ ಸಾವಿರಾರು ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದು ಹಲವರು ಮಳೆ ಶುಭ ಸೂಚನೆ ಎಂದು ಸಂಭ್ರಮಿಸಿದ್ದಾರೆ.
ಹಲವರು ಕುರ್ಚಿಗಳು, ಕಟೌಟ್ ಬ್ಯಾನರ್ಗಳನ್ನೇ ಕೊಡೆಗಳನ್ನಾಗಿಸಿಕೊಂಡರು. ಹಲವರು ಮಳೆ ಸುರಿಯುತ್ತಿದ್ದಂತೆ ದಿಕ್ಕಾಪಾಲಗಿ ಓಡಿದರು.
ಸಾವಿರಾರು ಜನರು ಮಳೆಯಲ್ಲಿ ನೆನೆದು ಪರದಾಡಬೇಕಾಯಿತು. ಹಲವರು ಮೆಟ್ರೋ ಸ್ಟೇಷನ್ ಬಳಿ ತೆರಳಿ ಆಶ್ರಯ ಪಡೆದರು.
ದೇಶದ ವಿವಿಧೆಡೆಯಿಂದ ಗಣ್ಯರು ಆಗಮಿಸಿರುವ ಹಿನ್ನಲೆಯಲ್ಲಿ ವ್ಯಾಪಕ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಕರ್ತವ್ಯದಲ್ಲಿದ್ದ ಹಲವರು ಮಳೆಯಲ್ಲಿ ನೆನೆದು ಪರದಾಡಬೇಕಾಯಿತು.
ಕಾರ್ಯಕ್ರಮದ ನೇರ ಪ್ರಸಾರ ನೀಡಲು ನೆರೆದಿದ್ದ ನೂರಾರು ಮಾಧ್ಯಮಗಳ ಸಿಬಂದಿಗಳು , ಕ್ಯಾಮರಾಮೆನ್ಗಳು ಮಳೆಯಿಂದಾಗಿ ತೀವ್ರ ವಾಗಿ ತೊಂದರೆ ಅನುಭವಿಸಿದರು.
ಭರ್ಜರಿ ಮಳೆಯಿಂದ ವೇದಿಕೆ ತೊಯ್ದು ಹೋಗಿದೆ. ಮಳೆ ವಾತಾವರಣ ಮುಂದುವರಿದರೆ ಪ್ರಮಾಣವಚನ ಸ್ವೀಕಾರ ಸಮಾರಂಭದ ಸ್ಥಳ ಬದಲಾವಣೆ ಮಾಡುವ ಸಾಧ್ಯತೆಗಳಿವೆ.
ಬೆಂಗಳೂರಿನಲ್ಲಿ ದಟ್ಟ ಮೋಡ ಕವಿದ ವಾತಾವರಣವಿದ್ದು, 4 ಗಂಟೆಯ ವೇಳೆಗೂ ಮಳೆಯಾಗುವ ಲಕ್ಷಣಗಳಿವೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪದಗ್ರಹಣ ನಡೆಯಲಿದೆ ಎನ್ನಲಾಗಿದೆ.
ಬೆಂಗಳೂರಿನ ವಿವಿಧೆಡೆ ಗುಡುಗು ಸಹಿತ ಗಾಳಿ ಮಳೆ ಸುರಿದಿದೆ. 4 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ತಣ್ಣಿಗಿನ ವಾತಾವರಣ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ