ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂ.1
Team Udayavani, Jun 10, 2018, 7:45 AM IST
ಕೊಪ್ಪಳ: ದೇಶದ ಜನರು ಯಾವುದರಲ್ಲೂ ಮುಂದಿಲ್ಲ. ಆದರೆ, ಮಕ್ಕಳನ್ನು ಹುಟ್ಟಿಸೋದ್ರಲ್ಲಿ ನಂ.1 ಸ್ಥಾನದಲ್ಲಿದ್ದಾರೆ
ಎಂದು ಮಾಜಿ ಸಚಿವ ಎಚ್.ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕುಷ್ಟಗಿಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮಕ್ಕಳನ್ನು ಹುಟ್ಟಿಸುವಲ್ಲಿ ಮುಂದಿದ್ದೇವೆ.ನವ ಜೋಡಿಗಳು ಕೇವಲ 2 ಮಕ್ಕಳನ್ನು ಹುಟ್ಟಿಸಬೇಕು. ಒಂದೇ ಸಾಕೆನಿಸುತ್ತದೆ. ನನಗೂ ಸಹಿತ ಇಬ್ಬರು ಮಕ್ಕಳಿದ್ದಾರೆ.
3ನೇ ಮಗು ಬೇಕೆಂದರೂ ನಾನು ಕಟ್ ಮಾಡಿಸಿ ಬಿಟ್ಟೆ. ಅಲ್ಲದೆ, ದಲಿತ ಸಮುದಾಯ ಬರಿ ಕುಡಿತದಲ್ಲೇ ಕಾಲ
ಕಳೆಯುತ್ತೆ. ಕೋಣ, ಕುರಿ, ಎಣ್ಣೆ ಹೊಡೆದು ನಮ್ಮ ಜನರು ವಾರಗಟ್ಟಲೇ ನಶೆಯಲ್ಲಿರುತ್ತಾರೆ. ದೇವರ ಪೂಜೆ
ಮಾಡೋದನ್ನು ಬಿಡಿ. ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಎಂದು ನಂಬಿ ಕೆಲಸ ಮಾಡಿ. ಕೆಲಸದಲ್ಲಿಯೇ
ದೇವರನ್ನು ಕಾಣಬೇಕು ಎಂದರು.
ರೂಪಾ ಶಶಿಧರ್ಗೂ ಸಚಿವ ಸ್ಥಾನ ಕೊಡಿ: ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆಂಜನೇಯ, ರಾಜ್ಯದಲ್ಲಿ
ಮಾದಿಗ ದೊಡ್ಡ ಸಮುದಾಯವಿದೆ. ಆದರೆ ಎಸ್ಸಿಯಲ್ಲಿ ಎಡಗೈಗೆ ಸಚಿವ ಸ್ಥಾನ ಸಿಕ್ಕಿಲ್ಲ. ಶಾಸಕಿ ರೂಪಾ ಶಶಿಧರ್
ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಹೈಕಮಾಂಡ್ಗೆ ಒತ್ತಾಯ ಮಾಡುವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ