ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರ
Team Udayavani, Jun 11, 2018, 7:10 AM IST
ಕೊಪ್ಪಳ: ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರವೊಂದು ಬಂದಿದ್ದು, 50 ಲಕ್ಷ ರೂ. ಹಣದ
ಬೇಡಿಕೆ ಇಡಲಾಗಿದೆ. ಈ ಕುರಿತು ಎಸ್ಪಿ, ಡಿಎಸ್ಪಿಗೆ ಶಾಸಕರು ದೂರು ನೀಡಿದ್ದು, ಪೊಲೀಸರು ತನಿಖೆ ಶುರು
ಮಾಡಿದ್ದಾರೆ. ಜೂ.6ರಂದು ಸಂಜೆ ಮುನವಳ್ಳಿ ನಿವಾಸಕ್ಕೆ ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ವಾಚ್ಮನ್
ಕೈಯಲ್ಲಿ ಪತ್ರವೊಂದನ್ನಿತ್ತು ತೆರಳಿದ್ದಾರೆ.
“2014-2018ರ ಚುನಾವಣೆವರೆಗೂ ನಮ್ಮ ಕರೆನ್ಸಿ ಬಳಸಿ ಸರ್ಪೋಟ್ ಮಾಡುತ್ತಾ ಸಹಕರಿಸಿದ್ದೀರಿ. ತುಂಬಾ ಥ್ಯಾಂಕ್ಸ್. ನೀವು 9-5-2018 ರಂದು 500 ರೂ. ಮುಖಬೆಲೆಯ ಒಂದು ಕೋಟಿ ರೂ. ಹಣ ತೆಗೆದುಕೊಂಡಿದ್ದೀರಿ. ಅದರಲ್ಲಿ ನಮಗೆ 50 ಲಕ್ಷ ನೀಡುತ್ತಿಲ್ಲ. ಫೋನ್ ಮಾಡಿದರೂ ರಿಸೀವ್ ಮಾಡದೇ ವಂಚಿಸುತ್ತಿದ್ದೀರಿ. ನಿಮಗೆ ಇನ್ನೂ 3-4 ದಿನದಲ್ಲಿ 10 ಲಕ್ಷ ರೂ. ಕರೆನ್ಸಿ ವಿಆರ್ಎಲ್ ಮೂಲಕ ಕಳಿಸುತ್ತೇವೆ. ಆ ಮೇಲೆ ನಮ್ಮ ಹುಡುಗರು ಬರ್ತಾರೆ. ಆ
ಮೇಲೆ ನಿಮ್ಮಿಷ್ಟ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಅಲ್ಲದೆ, ಜೂ.7ರಂದು ಮುನವಳ್ಳಿಗೆ ಕರೆ ಮಾಡಿ ನಮಗೆ
50 ಲಕ್ಷ ಹಣ ಕೊಡುವುದು ಬಾಕಿಯಿದೆ. ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ