“ಸೇವೆ ‘ಗೆ ಅಪಾರ್ಥ ಬೇಡ: ಹೆಬ್ಟಾಳಕರ
Team Udayavani, Jun 18, 2018, 6:25 AM IST
ಬೆಳಗಾವಿ: ತಾವು ಬಳಸಿದ “ಸೇವೆ’ ಪದದ ಬಗ್ಗೆ ಯಾವುದೇ ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರಿಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಸೇವೆ ಎಂದರೆ ಪಕ್ಷದ ಕೆಲಸ. ಇದೇ ಅರ್ಥದಲ್ಲೇ ನಾನು ಸೇವೆ ಎಂಬ ಪದ ಪ್ರಯೋಗಿಸಿದ್ದೇನೆ. ಸಂಪುಟ ರಚನೆ ಸಂದರ್ಭದಲ್ಲಿ ಯಾವ ಸೇವೆ ನೋಡಿ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬುದರ ಬಗ್ಗೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ. ಇದಕ್ಕೆ ಸಚಿವೆ ಜಯಮಾಲಾ ಕೂಡ ಅಸಮಾಧಾನಗೊಂಡಿದ್ದರು. ಆದರೆ ನಾನು ಬಳಸಿದ್ದ ಸೇವೆ ಪದದ ಬಗ್ಗೆ ಅಪಾರ್ಥ ಮಾಡಿಕೊಳ್ಳಬಾರದೆಂದು ಮನವಿ ಮಾಡಿದರು.