ತಂದೆಗೆ ಬೇಡವಾದ ಮಗಳಿಗೆ ಕೋರ್ಟ್‌ ಆಸರೆ


Team Udayavani, Jun 18, 2018, 6:00 AM IST

high-court-karnataka.jpg

ಬೆಂಗಳೂರು: ಮನೆಬಿಟ್ಟುಹೋದ ಮಗಳನ್ನು ಹುಡುಕಿಕೊಡುವಂತೆ ಹೈಕೋರ್ಟ್‌ ಮೊರೆ ಹೋದ ತಂದೆ, ಕೋರ್ಟ್‌ ಆ ಕೆಲಸ ಮಾಡಿದಾಗ ಆಕೆ ತನ್ನ ಮನೆಗೆ ಬರುವುದೇ ಬೇಡ ಎಂದ. ಇದರಿಂದ ಕಂಗಾಲಾದ ಯುವತಿಗೆ ಕೊನೆಗೆ ನ್ಯಾಯಾಲಯವೇ ಆಸರೆ ಕೊಡಿಸಿದ ಪ್ರಸಂಗ ಇದು.

ಮಗಳು ಕಳೆದುಹೋಗಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಆಕೆ ಪತ್ತೆಯಾಗಿಲ್ಲ. ಆದ್ದರಿಂದ ಆಕೆಯನ್ನು ಹುಡುಕಿಕೊಡಿ. ನನ್ನ ವಶಕ್ಕೆ ಒಪ್ಪಿಸಿ ಎಂದು ತಂದೆಯೊಬ್ಬ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲಿಲಿಸಿದ್ದರು. ಅದರಂತೆ ಹೈಕೋರ್ಟ್‌ ಸೂಚನೆಯಂತೆ ಪೊಲೀಸರು ತನ್ನ ಅತ್ತೆ ಮನೆ ಸೇರಿದ್ದ ಮಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ತಂದೆ-ಮಗಳನ್ನು ಕರೆಸಿದ ನ್ಯಾಯಮೂರ್ತಿಗಳು, ಮಗಳನ್ನು ಕರೆದೊಯ್ಯುವಂತೆ ತಂದೆಗೆ ಸೂಚಿಸಿದರು.

ಅಷ್ಟರಲ್ಲಿ ತಂದೆಯ ವರಸೆ ಬದಲಾಯಿತು. ನಾನು ಹೇಳಿದ ಹುಡುಗನನ್ನು ಮದುವೆಯಾಗುವುದಾದರೆ ಮಾತ್ರ ಪುತ್ರಿಯನ್ನು ಮನೆಗೆ ಕರೆದೊಯ್ಯುತ್ತೇನೆ ಎಂದು ಹೇಳಲಾರಂಭಿಸಿದ. ಆದರೆ, ಪುತ್ರಿ, ನಾನು ಮದುವೆಯಾಗುವುದಾದರೆ ಮಾವನನ್ನು ಮಾತ್ರ ಎಂದು ಪಟ್ಟುಹಿಡಿದಳು. ಹೀಗಾಗಿ ನ್ಯಾಯಮೂರ್ತಿಗಳು ಇಬ್ಬರನ್ನು ತಮ್ಮ ಕೊಠಡಿಗೆ ಕರೆಸಿ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಇಬ್ಬರೂ ತಮ್ಮ ಪಟ್ಟು ಸಡಿಲಿಸಲಿಲ್ಲ. ನಾನಾ ರೀತಿಯಲ್ಲಿ ಬುದ್ಧಿವಾದ ಹೇಳಿದರೂ ಒಪ್ಪಲಿಲ್ಲ.

ಕೊನೆಗೆ ನ್ಯಾಯಮೂರ್ತಿಗಳೇ ಆಕೆಗೆ ಒಂದು ದಾರಿ ತೋರಿಸಲು ಮುಂದಾದರು. ತನ್ನ ಮಾತಿಗೆ ಒಪ್ಪದ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಹೆತ್ತ ತಂದೆಯೇ ನಿರಾಕರಿಸುತ್ತಿರುವುದರಿಂದ ನ್ಯಾಯಪೀಠವೇ ಪೋಷಕರ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂದು ತೀರ್ಮಾನಿಸಿದರು. ಅಲ್ಲದೆ, ಆಕೆಯ ಭವಿಷ್ಯದ ದೃಷ್ಟಿಯಿಂದ ಅವರ ಅತ್ತೆಯ ಮನೆಗೆ ಕಳುಹಿಸಿಕೊಡುವಂತೆ ಪೊಲೀಸರಿಗೆ ನಿರ್ದೇಶಿಸಿತು. ಯುವತಿಯನ್ನು ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಬೇಕು ಎಂದು ಆಕೆಯ ಅತ್ತೆಗೆ ಸೂಚನೆಯನ್ನೂ ನೀಡಿ ಅರ್ಜಿ ಇತ್ಯರ್ಥ ಪಡಿಸಿತು.

ಪ್ರಕರಣ ಏನು?:
ಮಂಡ್ಯ ಜಿಲ್ಲೆಯ ವಿಶ್ವನಾಥ್‌ ಅವರ ಮಗಳು ಪವಿತ್ರ  ದ್ವೀತಿಯ ಪಿಯುಸಿ ಉತ್ತೀರ್ಣಳಾಗಿದ್ದು, ಮನೆಯಲ್ಲಿಯೇ ಇದ್ದಳು. ಕಳೆದ  ನಾಲ್ಕೈದು ತಿಂಗಳ ಹಿಂದೆ ವಿಶ್ವನಾಥ್‌ ಅವರ ಹಿರಿಯ ಸಹೋದರಿ ಮನೆಗೆ ಬಂದು, ತಮ್ಮ ಮಗ ಶಿವಕುಮಾರ್‌ಗೆ ಪವಿತ್ರಳನ್ನು ವಿವಾಹ ಮಾಡಿಕೊಡುವಂತೆ ಕೇಳಿದ್ದರು. ಆದರೆ, ಇದಕ್ಕೆ ವಿಶ್ವನಾಥ್‌ ದಂಪತಿ ಒಪ್ಪಲಿಲ್ಲ. ಯಾವುದೇ ಕಾರಣಕ್ಕೂ ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿಕಳುಹಿಸಿದ್ದರು. (ಎಲ್ಲರ  ಹೆಸರುಗಳನ್ನು ಬದಲಾಯಿಸಲಾಗಿದೆ)

ಈ ಮಧ್ಯೆ ಮೇ 17ರಂದು ಪದವಿ ಕಾಲೇಜಿಗೆ ಸೇರುವ ಸಲುವಾಗಿ ಪ್ರವೇಶಾತಿ ಪತ್ರ ತರುವುದಾಗಿ ಮನೆಯಿಂದ ತೆರಳಿದ್ದ ಪವಿತ್ರ ಮನೆಗೆ ವಾಪಾಸ್‌ ಬಂದಿರಲಿಲ್ಲ. ಇದರಿಂದ ಕಂಗಾಲಾದ ವಿಶ್ವನಾಥ್‌ ದಂಪತಿ, ಮಗಳ ಸ್ನೇಹಿತರನ್ನು ವಿಚಾರಿಸಿದರೂ ಆಕೆಯ ಬಗ್ಗೆ ಮಾಹಿತಿ ಸಿಗಲಿಲ್ಲ. ಮಾರನೇ ದಿನ ಕಾಲೇಜು ಸೇರಿ ಹಲವು ಕಡೆ ಹುಡುಕಾಡಿದ ಬಳಿಕ ತಮ್ಮ ಅಕ್ಕನ ಮನೆಯ ಬಳಿ ತೆರಳಿರಬಹುದೇ ಎಂದು ಹೋಗಿ ನೋಡಿದಾಗ ಪವಿತ್ರ ಅಲ್ಲಿರುವುದು ಕಂಡು ಬಂತು. ಮನೆಗೆ ವಾಪಸ್‌ ಬರುವಂತೆ ಕರೆದರೂ ಒಪ್ಪದ ಆಕೆ ಶಿವಕುಮಾರ್‌ ಜತೆ ಮದುವೆ ಮಾಡಿಸಲು ಒಪ್ಪುವುದಾದರೆ ಮಾತ್ರ ಬರುವುದಾಗಿ ಹೇಳಿದ್ದಳು. ಶಿವಕುಮಾರ್‌ ಜತೆ ಚರ್ಚಿಸಿ ಕರೆದೊಯ್ಯೋಣ ಎಂದರೆ ಆತ ಕೂಡ ಮನೆಯಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಲಸೂರು ಪೊಲೀಸ್‌ ಠಾಣೆಯಲ್ಲಿ ಮಗಳು ನಾಪತ್ತೆ ಬಗ್ಗೆ  ದೂರು ನೀಡಿದ್ದರು. ಅಷೇ ಅಲ್ಲದೆ ಮಗಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಆದೇಶಿಸುವಂತೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸುವ ಮೂಲಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

– ಮಂಜುನಾಥ್‌ ಲಘುಮೇನಹಳ್ಳಿ

ಟಾಪ್ ನ್ಯೂಸ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.