3 ಅಪಘಾತಗಳು:ಹಾಸನದಲ್ಲಿ ತಾಯಿ-ಮಗ,ಚಿತ್ರದುರ್ಗದಲ್ಲಿ ತಂದೆ-ಮಗಳು ಬಲಿ
Team Udayavani, Jun 18, 2018, 10:32 AM IST
ಹುಬ್ಬಳ್ಳಿ/ಹಾಸನ/ಚಿತ್ರದುರ್ಗ: ರಾಜ್ಯದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ 3 ಪ್ರತ್ಯೇಕ ಅವಘಡಗಳು ನಡೆದಿದ್ದು, ಹಾಸನದಲ್ಲಿ ಲಾರಿಗೆ ಹಿಂಬಂದಿಯಿಂದ ಮಿನಿಲಾರಿ ಢಿಕ್ಕಿಯಾಗಿ ತಾಯಿ, ಮಗ ದಾರುಣವಾಗಿ ಸಾವನ್ನಪ್ಪಿದ್ದು, ಚಿತ್ರದುರ್ಗದಲ್ಲಿ ಮರಕ್ಕೆ ಕಾರು ಢಿಕ್ಕಿಯಾಗಿ ತಂದೆ , ಮಗಳು ಸಾವನ್ನಪ್ಪಿದ್ದು, ಹುಬ್ಬಳ್ಳಿಯಲ್ಲಿ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಢಿಕ್ಕಿಯಾಗಿ 17 ಮಂದಿ ಗಾಯಗೊಂಡಿದ್ದಾರೆ.
ಹಾಸನದ ಚೆನ್ನರಾಯ ಪಟ್ಟಣದ ಶೆಟ್ಟಿ ಹಳ್ಳಿ ಬಳಿ ಪೈಪ್ ತುಂಬಿದ್ದ ಲಾರಿಗೆ ಹಿಂಬದಿಯಿಂದ ಮಿನಿ ಟ್ರಕ್ ಢಿಕ್ಕಿಯಾಗಿದ್ದು ಪರಿಣಾಮವಾಗಿ ತಾಯಿ ಮಗ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಗೌರಿ ಪಾಳ್ಯದಿಂದ ಒಂದೇ ಕುಟುಂಬದ 8 ಮಂದಿ ಹಾಸನದ ಜಾವಗಲ್ನ ದರ್ಗಾಕ್ಕೆ ಮಿನಿ ಟ್ರಕ್ನಲ್ಲಿ ತೆರಳುತ್ತಿದ್ದವರು , ಮುಂಭಾಗದಲ್ಲಿದ್ದ 35 ವರ್ಷ ಪ್ರಾಯದ ಷಹತಾಜ್ ಮತ್ತು ಪುತ್ರ 3 ವರ್ಷದ ಉಮರ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚಾಲಕ ಶಫಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಂಬದಿಯಲ್ಲಿದ್ದ ಐವರೂ ಸಣ್ಣ ಪುಟ್ಟ ಗಾಯಗಳಿಗೊಳಗಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚೆನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ಮರಕ್ಕೆ ಗುದ್ದಿದ ಕಾರು
ಹೊಸದುರ್ಗದ ಎನ್.ಜಿ.ಹಳ್ಳಿ ಬಳಿ ಮರಕ್ಕೆ ಕಾರು ಢಿಕ್ಕಿಯಾದ ಪರಿಣಾಮ 40 ವರ್ಷದ ಮಂಜುನಾಥ ಮತ್ತು ಪುತ್ರಿ 1 ವರ್ಷದ ಮಗು ರಾಜೇಶ್ವರಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿರುವ ಬಗ್ಗೆ ವರದಿಯಾಗಿದೆ.
ಹುಬ್ಬಳ್ಳಿಯಲ್ಲಿ 17ಮಂದಿಗೆ ಗಾಯ
ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದ ಬಳಿ ಹೆದ್ದಾರಿಯಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಲಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿದ್ದು ಬಸ್ನಲ್ಲಿದ್ದ 17 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ