ಷರತ್ತುಬದ್ಧ ಪತ್ರ ಸಿದ್ಧಪಡಿಸಿ ಪ್ರತಿನಿಧಿಗಳನ್ನು ಕಳಿಸುತ್ತೇವೆ
Team Udayavani, Jun 25, 2018, 6:55 AM IST
ಚನ್ನರಾಯಪಟ್ಟಣ: ಷರತ್ತಿನ ಮೇಲೆ ಶೀಘ್ರವೇ ಇಬ್ಬರು ಪ್ರತಿನಿಧಿಗಳನ್ನು ಕಾವೇರಿ ನಿರ್ವಹಣಾ ಮಂಡಳಿಗೆ ಕಳಿಸು
ತ್ತೇವೆ. ಷರತ್ತುಬದ್ಧ ಪತ್ರ ಸಿದ್ಧಪಡಿಸಿ, ನಮ್ಮ ಪ್ರತಿನಿಧಿಗಳನ್ನು ಕಳಿಸಲಾಗುವುದು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಶ್ರವಣಬೆಳಗೊಳದಲ್ಲಿ ಮಾತನಾಡಿ, ನಮ್ಮ ಎಲ್ಲಾ ಆಕ್ಷೇಪಣೆಗಳನ್ನು ಈಗಾಗಲೇ ಕೇಂದ್ರದ ಮುಂದೆ ಸಿಎಂ
ಮನವರಿಕೆ ಮಾಡಿದ್ದಾರೆ. ಈ ವಿಚಾರದಲ್ಲಿ ಮುಂದಿನ ಹೋರಾಟ ಇದ್ದೇ ಇದೆ. ಕಾವೇರಿ ನಿರ್ವಹಣಾ ಮಂಡಳಿ ವಿಚಾರವಾಗಿ ಈಗಾಗಲೇ ಕೇಂದ್ರ ಜಲಸಂಪನ್ಮೂಲ ಸಚಿವರು ಮತ್ತು ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಇದು ಸುಪ್ರೀಂ ಕೋರ್ಟ್ನ ತೀರ್ಪಾಗಿರುವುದರಿಂದ ಅದಕ್ಕೆ ಬದ್ಧವಾಗಿರಬೇಕು ಎಂದು ಹೇಳಿದರು.
ಪ್ರತಿ 10 ದಿನಕ್ಕೊಮ್ಮೆ ನೀರಿನ ಅಳತೆ ಮಾಡುತ್ತಾರೆ. ಇನ್ನು ಮುಂದೆ ನಾವು ಪ್ರಾಧಿಕಾರ ಹೇಳಿದ ರೀತಿ ನೀರು ಬಿಡಬೇಕಾಗುತ್ತದೆ. ಬೆಳೆ ಸೇರಿ ಎಷ್ಟು ನೀರು ಬಳಕೆ ಮಾಡಬೇಕೆಂದು ಅವರೇ ಹೇಳುತ್ತಾರೆ. ಇದು ನಮ್ಮ
ನಾಡಿನ ಜನತೆಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ