ಕಾವ್ಯಾನುವಾದದಿಂದ ಪ್ರಸ್ತುತತೆ ಪ್ರಶ್ನೆಗೆ ಉತ್ತರ 


Team Udayavani, Jun 26, 2018, 6:30 AM IST

halegannada-sahitya.jpg

ಚನ್ನರಾಯಪಟ್ಟಣ: “ಹಳಗನ್ನಡದ ಕಾವ್ಯಗಳನ್ನು ಆಧುನಿಕ ಗದ್ಯಕ್ಕೆ ತಂದು ಅವುಗಳನ್ನು ಕನ್ನಡೇತರ ಭಾಷೆಗಳಿಗೆ ಅನುವಾದಿಸಿದಾಗ ಹಳಗನ್ನಡದ ಪ್ರಸ್ತುತತೆಯ ಪ್ರಶ್ನೆ ಎತ್ತುವವರಿಗೆ ಉತ್ತರ ಸಿಗುತ್ತದೆ’ ಎಂದು ಸಾಹಿತಿ ಡಾ.ಷ.ಶೆಟ್ಟರ ತಿಳಿಸಿದರು.

ಜೈನಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಳಗನ್ನಡದ ಸಾರಅರಿಯಬೇಕಾದರೆ ಆ ಕಾವ್ಯಗಳನ್ನು ಇಂದಿನ ಆಧುನಿಕ ಗದ್ಯಕ್ಕೆ ತರ್ಜುಮೆ ಮಾಡಿದ ನಂತರ ಪ್ರಪಂಚದ ಇತರೆ ಭಾಷೆಗಳಿಗೆ ಅನುವಾದ ಮಾಡಿದರೆ ಅವುಗಳಲ್ಲಿರುವ ತಿರುಳು ತಿಳಿಯುತ್ತದೆ ಎಂದರು.

ಹಳಗನ್ನಡವನ್ನು ಓದಲು ವ್ಯಾಕರಣ, ಛಂದಸ್ಸು ಅಲಂಕಾರ ತಿಳಿದಿರಲೇಬೇಕೆಂಬ ಕಡ್ಡಾಯವಿಲ್ಲ, ಆದರೆ ಕಾವ್ಯದಲ್ಲಿರುವ ತಿರುಳನ್ನು ಅಭಿರುಚಿ ಇರಬೇಕು. ಕಾವ್ಯವನ್ನು ಓದುತ್ತಾ ಹೋದಂತೆ ಅದರಲ್ಲಿರುವ ವಿಷಯದ ಅರಿವಿಗೆ ವ್ಯಾಕರಣ, ಛಂದಸ್ಸು ಅಲಂಕಾರ ಪ್ರಸ್ತುತವಾಗುತ್ತದೆ ಎಂದರು.

ಕನ್ನಡ ಪುನರುತ್ಥಾನ ಆರಂಭವಾಗಿದ್ದೇ 19 ನೇ ಶತಮಾನದಲ್ಲಿ ಅದಕ್ಕೂ ಮುಂಚೆ ಕನ್ನಡ ಸಾಹಿತ್ಯ ಬರಹ ನುಡಿ ಗೊತ್ತಿರಲಿಲ್ಲ. ಆದರೆ ಬ್ರಾಹ್ಮಿ ಅಕ್ಷರವನ್ನು ಮರತಂತೆ ಕನ್ನಡ ಅಕ್ಷರನ್ನು ಮರೆತಿರಲಿಲ್ಲ. ಪಂಪ, ರನ್ನ ಹಾಗೂ ಜನ್ನ ಗೊತ್ತಿರಲಿಲ್ಲ ಕನ್ನಡದ ಉಚ್ಛಾ†ಯ ಸ್ಥಿತಿ ಎಂದು 19 ನೇ ಶತಮಾತನದ ಅಂತ್ಯ ಹಾಗೂ 20 ನೇ ಶತಮಾನದ ಆರಂಭವನ್ನು ಗುರುತಿಸಬಹುದು ಎಂದು ಹೇಳಿದರು.

ಕಾವ್ಯಪ್ರಭೇದಕ್ಕೆ ನಿರ್ದಿಷ್ಟ ಶೈಲಿಯಿಲ್ಲ. ಸಮಾಜದ ಸಮಸ್ಯೆಗಳನ್ನು ಪ್ರಚೋದಿಸಲು ಕಾವ್ಯ ಬೇಕಾಗುತ್ತದೆ. ಕನ್ನಡದಲ್ಲಿ ಆಯಾ ಕಾಲ ಘಟ್ಟದ ಆಡು ಮಾತಿನ ಸಾಹಿತ್ಯ ಬದಲಾಗುತ್ತಾ ಬಂದಿದೆ. ಕನ್ನಡ ಯಾವಾಗ ಬರವಣಿಗೆಯ ರೂಪದಲ್ಲಿ ಬಂತು, ಲಿಪಿ ಯಾವಾಗ ಬಂತು ಎಂಬುದು ತಿಳಿಯುವುದಿಲ್ಲ. ಸಮಕಾಲೀನ ಇತರ ಭಾಷೆಗಳಿಂದ ಕನ್ನಡದ ಅಸ್ಮಿತೆ ಅರಿಯಬೇಕು ಎಂದರು.

ಹಲ್ಮಿಡಿ ಶಾಸನ ಪ್ರಶ್ನಾರ್ಹ?
ಹಲ್ಮಿಡಿ ಶಾಸನವೇ ಕನ್ನಡದ ಪ್ರಥಮ ಶಾಸನ ಎಂಬುದು ಪ್ರಶ್ನಾರ್ಹ. ಏಕೆಂದರೆ ಈ ಶಾಸನದಲ್ಲಿ ದಿನಾಂಕ
ನಮೂದಾಗಿಲ್ಲ. ಶಾಸನವನ್ನು ಕಂಡು ಹಿಡಿದವರು ಕ್ರಿ.ಶ.450 ರಲ್ಲಿ ರಚಿತವಾಗಿರಬಹುದೆಂದು ತಿಳಿಸಿದ್ದಾರೆ
ಎಂದು ಡಾ.ಷ.ಶೆಟ್ಟರ ಹೇಳಿದರು.

ಹಲ್ಮಿಡಿ ಶಾಸನದಲ್ಲಿ ಪ್ರಬುದಟಛಿ ಕನ್ನಡ ಬಳಕೆಯಾಗಿದೆ, ಅದಕ್ಕಿಂತಲೂ ಮುಂಚಿತವಾಗಿ ಬಾಲ್ಯಾವಸ್ಥೆಯ ಕನ್ನಡ
ಇದ್ದಿರಬಹುದು. ಆಗಿನ ಕಾಲದ ಸಂಶೋಧಕರನ್ನು ಅಲ್ಲಗಳೆಯುವಂತಿಲ್ಲ ಅಂದಿನ ಕಾಲದ ಸ್ಥಿತಿಗತಿ ಅಧ್ಯಯನದ
ಬೆಳವಣಿಗೆಗಳಿಂದ ನಿರ್ಧರಿಸಿರುತ್ತಾರೆ. ಅವರನ್ನು ಟೀಕೆ ಮಾಡುವುದು ತಪ್ಪಾಗುತ್ತದೆ. ಆದರೆ ಅದನ್ನೇ ಸರಿ
ಅಂದುಕೊಂಡು ಇರುವುದೂ ತಪ್ಪಾಗುತ್ತದೆ ಎಂದರು.

ಧರ್ಮ ಸಹಿಷ್ಣುತೆ, ಇನ್ನೊಬ್ಬರ ವಿಚಾರವನ್ನು ಸಹಿಸುವಂತಹ ವಿಷಯಗಳು ಕವಿರಾಜ ಮಾರ್ಗ ಓದಿದಾಗ ತಿಳಿಯುತ್ತದೆ. ಆದರೆ ಇಂದಿನ ರಾಜಕಾರಣಿಗಳು ತಮ್ಮ ವಿಚಾರವಂತಿಕೆಯನ್ನು ಹೇರಲು ಕೊಲೆ ಮಾಡುವ ಹಂತಕ್ಕೆ
ತಲುಪಿದ್ದಾರೆ.
– ಡಾ.ಷ.ಶೆಟ್ಟರ, ಸಾಹಿತಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.