ಕಿರಿಕ್ ಪತ್ನಿಯಿಂದ ಮುಕ್ತಿಗೆ ಅತ್ತಿ ಗಿಡಕ್ಕೆ ಮೊರೆ!
Team Udayavani, Jun 27, 2018, 6:00 AM IST
ಚಿಕ್ಕೋಡಿ: “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಎನ್ನುವ ಹಾಡು ಜನಜನಿತ. ಆದರೆ, ಹೆಂಡತಿಯ ಸಹವಾಸವೇ ಬೇಡ. ಏಳೇಳು ಜನ್ಮದಲ್ಲೂ ನನಗೆ ಮದುವೆ ಸಹವಾಸವೇ ಬೇಡ. ಕುಮಾರನಾಗಿಯೇ ಬದುಕುವ ಅವಕಾಶ ಕಲ್ಪಿಸು ದೇವರೇ ಎಂದು ಪತಿರಾಯನೊಬ್ಬ ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ್ದಾನೆ!
ತನಗೆ ಸಜ್ಜನ, ಶ್ರೀರಾಮಚಂದ್ರನಂಥ ಪತಿ ಬೇಕೆಂದು ಪ್ರತಿ ಹೆಣ್ಣು ಮಗಳು ವ್ರತ ಆಚರಣೆ ಮಾಡುತ್ತಾರೆ. ಆದರೆ, ಚಿಕ್ಕೋಡಿ ಪಟ್ಟಣದ ಪುರುಷ ಸಾಂತ್ವನ ಕೇಂದ್ರದ ಮುಖ್ಯಸ್ಥ ಶಶಿಧರ ರಾಮಚಂದ್ರ ಕೋಪರ್ಡೆ ಮಾತ್ರ ತನ್ನ ಪತ್ನಿಯ ಕಾಟ ತಾಳದೇ ಇನ್ನೆಂದೂ ನನಗೆ ಮದುವೆನೇ ಬೇಡ. ಹೆಂಡತಿ ಕಾಟದಿಂದ ಮುಕ್ತಿ ಸಿಗಲಿ ಎಂದು ವಟ ಸಾವಿತ್ರಿ ಹುಣ್ಣಿಮೆ ಅರ್ಥಾತ್ ಕಾರ ಹುಣ್ಣಿಮೆ ನಿಮಿತ್ತ ಅತ್ತಿ ಗಿಡಕ್ಕೆ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದ್ದಾನೆ. ಒಂದು ವೇಳೆ ಮುಂದಿನ ಜನ್ಮದಲ್ಲಿ ಕಂಕಣ ಭಾಗ್ಯ ಕೂಡಿ ಬಂದರೂ ತೊಂದರೆ ಕೊಡುವ ಹೆಂಡತಿ ಮಾತ್ರ ಕೊಡಬೇಡಪ್ಪ ದೇವರೇ ಎಂದು ಬೇಡಿಕೊಂಡಿದ್ದಾನೆ. ಪ್ರತಿ ವರ್ಷ ಕಾರ ಹುಣ್ಣಿಮೆ ಮುನ್ನಾ ದಿನ ಮಹಿಳೆಯರು ತನ್ನ ಗಂಡನಿಗೆ ಆಯುಷ್ಯ, ಆರೋಗ್ಯ ದೊರೆಯಲಿ ಎಂದು ಅತ್ತಿ ಗಿಡಕ್ಕೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕಿ ಗಿಡಕ್ಕೆ ದಾರ ಕಟ್ಟುತ್ತಾರೆ.
ತನಗೆ ಏಳು ಜನ್ಮದಲ್ಲೂ ಈಗಿರುವ ಒಳ್ಳೆಯ ಗಂಡನೇ ಬೇಕು ಎಂದು ಸಂಕಲ್ಪ ಮಾಡಿ ಭಕ್ತಿ, ಶ್ರದೆಟಛಿಯಿಂದ ಪತಿಯ ಪಾದ
ಪೂಜೆ ಮಾಡಿ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಆದರೆ ಶಶಿಧರ ಕೋಪರ್ಡೆಮಾತ್ರ ಈ ಜನ್ಮದಲ್ಲಿ ತನ್ನ ಹೆಂಡತಿ ತನಗೆ ಹಾಗೂ ತನ್ನ ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮಂದಿರ ಮೇಲೆ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ತೊಂದರೆ ಕೊಟ್ಟಿದ್ದಾಳೆ. ಇಂತಹ ಪತ್ನಿ ಮುಂದಿನ ಜನ್ಮದಲ್ಲಿ ಬೇಡ ಎಂದು ಮಹಿಳೆಯರ ವಿರುದ್ಧವಾಗಿ ಅತ್ತಿ ಗಿಡಕ್ಕೆ ಪೂಜೆ ಸಲ್ಲಿಸಿದ್ದಾನೆ.
ಮುಂದಿನ ಜನ್ಮದಲ್ಲಿ ನನ್ನ ಮದುವೆ ಆಗದೇ ಕುಮಾರನಾಗಿ ಬದುಕಿದರೂ ಚಿಂತೆ ಇಲ್ಲ. ಆದರೆ, ಇಂತಹ ಕಿರುಕುಳ ನೀಡುವ, ಸುಳ್ಳು ಹೇಳಿ ಪ್ರಕರಣಗಳನ್ನು ದಾಖಲಿಸುವ ಹೆಂಡತಿಯಿಂದ ನನ್ನನ್ನು ರಕ್ಷಿಸು ಎಂದು ವಟ ಸಾವಿತ್ರಿ ಹುಣ್ಣಿಮೆ ನಿಮಿತ್ತ ಅತ್ತಿ ಗಿಡಕ್ಕೆ ಪೂಜೆ ಸಲ್ಲಿಸಿದ್ದೇನೆ.
● ಶಶಿಧರ ಕೋಪರ್ಡೆ, ಪುರುಷ ಸಾಂತ್ವನ ಕೇಂದ್ರದ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್