ಸಮ್ಮಿಶ್ರ ಸರ್ಕಾರ ಕೆಲವೇ ದಿನಗಳಲ್ಲಿ ಮುಳುಗಲಿದೆ: ಸಚಿವ ಡಿವಿಎಸ್
Team Udayavani, Jul 8, 2018, 11:10 AM IST
ಮಂಗಳೂರು: ಕಾಂಗ್ರೆಸ್ -ಜೆಡಿಎಸ್ನವರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದು ಕೆಲವೇ ದಿನಗಳಲ್ಲಿ ಸರ್ಕಾರ ಮುಳುಗಿ ಹೋಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್ ರಾಜ್ಯದ ಜನರು ಈ ಸರ್ಕಾರ ಹೊದರೆ ಸಾಕು ಅನ್ನುತ್ತಿದ್ದಾರೆ. ಕಾಂಗ್ರೆಸ್ -ಜೆಡಿಎಸ್ ನಡುವೆ ಕುರ್ಚಿಗಾಗಿ ಕಿತ್ತಾಟ, ಮಂತ್ರಿ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಕಿತ್ತಾಟದಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿದ್ದು , ಅಧಿಕಾರಿಗಳು ಆರಾಮವಾಗಿ ಖುಷಿ ಬಂದ ಹಾಗೆ ಇದ್ದಾರೆ ಎಂದರು.
ಮಳೆಗೆ ಮುಂಚಿತವಾಗಿ ಯಾವುದೇ ಸರ್ಕಾರವಾಗಲಿ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ, ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಬೇಕು. 5 ರಿಂದ 10 ಕೋಟಿ ರೂ ಪರಿಹಾರಕ್ಕಾಗಿ ಮೀಸಲಿಡಬೇಕು. ಆದರೆ ಸರ್ಕಾರ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಿಲ್ಲ. ಜನ ಮುಳುಗಿ ಹೋದರೆ ನಮಗೇನು ಅಂದಿದೆ. ಕೆಲವೇ ದಿನಗಳಲ್ಲಿ ಇವರು ಮುಳುಗುತ್ತಾರೆ ಎಂದರು.
ತೃತೀಯ ರಂಗ ಹರಿದ ಬಟ್ಟೆ ಯಂತೆ, ಒಂದು ಕಡೆ ಸೂಜಿ ಹಿಡಿದು ಹೊಲಿದರೆ ಇನ್ನೊಂದು ಕಡೆ ಹರಿಯುತ್ತಿದೆ. ಈಗ ಸಣ್ಣ ಸಣ್ಣ ತೂತುಗಳನ್ನು ಹೊಲಿಯಲಾಗಿದ್ದು ಇನ್ನೊಂದು ಕಡೆ ದೊಡ್ಡದಾಗಿ ಹರಿಯುತ್ತದೆ ಎಂದು ಲೇವಡಿ ಮಾಡಿದರು.
ಮಾಯವತಿಯವರು ಹೇಳಿದ್ದಾರೆ ಕಾಂಗ್ರೆಸ್ ಜೊತೆ ಹೊಗುವುದಿಲ್ಲ ಎಂದು.ತೆಲುಗುದೇಶಂ, ಟಿಆರ್ಎಸ್ ಜೊತೆಯಾಗಿ ಹೋಗುವುದಿಲ್ಲ. ಡಿಎಂಕೆ ,ಎಐಎಡಿಎಂಕೆ ಯಷ್ಟು ವೈರಿಗಳು ಜಗತ್ತಿನಲ್ಲೇ ಇಲ್ಲ. ಅಲ್ಲಿ ಒಬ್ಬರನ್ನು ನೋಡಿದರೆ ಒಬ್ಬರಿಗೆ ಆಗುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!