ತಗ್ಗಿದ ಎಚ್ಐವಿ: ಕರ್ನಾಟಕವೇ ಮಾದರಿ
Team Udayavani, Jul 21, 2018, 7:00 AM IST
ವಿಶ್ವಸಂಸ್ಥೆ: ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಎಚ್ಐವಿ ಪೀಡಿತರು, ಎಚ್ಐವಿ ಸೋಂಕಿ ಗೊಳಗಾದವರ ಸಂಖ್ಯೆಯಲ್ಲಿ
ಗಣನೀಯ ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ಏಡ್ಸ್ ನಿಯಂತ್ರಣ ಆಯೋಗ (ಯುಎನ್ಎಐಡಿಎಸ್) ವರದಿ ಮಾಡಿದೆ.
ವಿಶೇಷವೆಂದರೆ, ಸೋಂಕು ನಿಯಂತ್ರಣ ವಿಚಾರದಲ್ಲಿ ಭಾರತಕ್ಕೆ ಕರ್ನಾಟಕವೇ ಮಾದರಿ ಎಂದೂ ವರದಿ ಹೇಳಿದೆ.”ಮೈಲ್ಸ್ ಟು ಗೋ ಕ್ಲೋಸಿಂಗ್ ಗ್ಯಾಪ್ಸ್, ಬ್ರೇಕಿಂಗ್ ಬ್ಯಾರಿಯರ್ಸ್, ರೈಟಿಂಗ್ ಇನ್ ಜಸ್ಟಿಸಸ್’ ಎಂಬ ವರದಿಯಲ್ಲಿ, ಭಾರತ ಸೇರಿದಂತೆ ಕಾಂಬೋಡಿಯ, ಮ್ಯಾನ್ಮಾರ್, ಥಾಯ್ಲೆಂಡ್ ವಿಯೆಟ್ನಾಂಗಳಲ್ಲಿ 2010ರಿಂದ 2017ರವರೆಗೆ ಅಲ್ಲಿನ ಸರ್ಕಾರಗಳು, ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಜಾರಿಗೊಳಿಸಲಾದ ಯೋಜನೆಗಳು ಫಲವಾಗಿ ಈ ಸೋಂಕು ಗಣನೀಯವಾಗಿ ನಿಯಂತ್ರಣಗೊಂಡಿದೆ ಎನ್ನಲಾಗಿದೆ. ಆದರೆ, ಈ ಸೋಂಕಿನ ಸಂಪೂರ್ಣ ನಿರ್ಮೂಲನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದಿರುವ ವರದಿ, ಪಾಕಿಸ್ತಾನ ಹಾಗೂ μಲಿಪ್ಪೀನ್ಸ್ಗಳಲ್ಲಿ ಇದರ ತೀವ್ರತೆ ಹೆಚ್ಚಾಗಿದೆ ಎಂದಿದೆ.
ಮಾದರಿಯಾದ ಕರ್ನಾಟಕ: ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ, ಎಚ್ಐವಿ ಸೋಂಕು ನಿಯಂತ್ರಣ ವಿಚಾರದಲ್ಲಿ ಕರ್ನಾಟಕ ಗಣನೀಯ ಸಾಧನೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸಮಸ್ಯೆ ಯ ನಿವಾರಣೆಗಾಗಿ, ನೈರ್ಮಲಿÂàಕರಣದ ಕಾರ್ಯಾಗಾರಗಳು, ಎಚ್ಐವಿ ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವ ಯತ್ನಗಳಂಥ ಕ್ರಮಗಳಿಂದ ಹಾಗೂ “ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್’ನ ಪ್ರಾಯೋಜ ಕತ್ವದಲ್ಲಿ ಜಾರಿಗೊಂಡ ಆವಾಹನೆ ಯೋಜನೆ ಯಡಿ ಕರ್ನಾಟಕದಲ್ಲಿ ಏಡ್ಸ್ ಮಹಾಮಾರಿಯ ಪ್ರಾಬಲ್ಯ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
18% – ಕಳೆದ ಏಳು ವರ್ಷಗಳ ಅವಧಿಯಲ್ಲಿ ವಿಶ್ವದಲ್ಲಿ ಕಡಿಮೆಯಾದ ಎಚ್ಐವಿ ಪೀಡಿತರ ಸಂಖ್ಯೆ
36.9 ದಶಲಕ್ಷ – 2017ರಅಂತ್ಯದ ವೇಳೆಗೆ ವಿಶ್ವದಲ್ಲಿ ಇರುವ ಎಚ್ಐವಿ ಪೀಡಿತರ ಸಂಖ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
ಲೋಕಸಭಾ ಕಣದಲ್ಲಿ ನಾರಿಶಕ್ತಿ ಪ್ರದರ್ಶನ: ಕಾಂಗ್ರೆಸ್ನಿಂದ 6, ಬಿಜೆಪಿಯಿಂದ 2 ಮಹಿಳೆಯರು
Lok Sabha Polls; ರಾಜ್ಯದ ಕಣ ಅಂತಿಮ: 474 ಅಭ್ಯರ್ಥಿಗಳು
MUST WATCH
ಹೊಸ ಸೇರ್ಪಡೆ
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ