ಮಹದಾಯಿಗಾಗಿ 3 ವರ್ಷದಲ್ಲಿ 1100 ಮನವಿ
Team Udayavani, Jul 21, 2018, 6:00 AM IST
ನರಗುಂದ: ಜೀವಜಲಕ್ಕಾಗಿ ಹೋರಾಟ ನಡೆಸುತ್ತಲೇ ಇರುವ ಮಹದಾಯಿ ಹೋರಾಟಗಾರರು ಕಳೆದ ಮೂರು ವರ್ಷದಿಂದ
ಇದುವರೆಗೆ ಸಲ್ಲಿಸಿರುವ ಮನವಿಗಳು ಒಂದಲ್ಲ ಎರಡಲ್ಲ. ಬರೋಬ್ಬರಿ 1,100ಕ್ಕೂ ಹೆಚ್ಚು.
ತಹಶೀಲ್ದಾರರಿಂದ ರಾಜ್ಯಪಾಲರವರೆಗೆ, ಶಾಸಕರಿಂದ ಪ್ರಧಾನಿ-ರಾಷ್ಟ್ರಪತಿವರೆಗೂ ಸೇರಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಮುಖ ಅಧಿಕಾರಸ್ಥರಿಗೆ ಇಷ್ಟೊಂದು ಪ್ರಮಾಣದಲ್ಲಿ ಮನವಿ ಸಲ್ಲಿಸಿಯೂ ವಿವಾದ ಮಾತ್ರ ಇತ್ಯರ್ಥಗೊಂಡಿಲ್ಲ.
ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರ ಹೋರಾಟದ ಹಿಂದೆ ಸಹಿಸಲಾಗದ ನೋವಾಗಿದ್ದು, ಕೇವಲ ನರಗುಂದ ದಿಂದ ಇಷ್ಟು ಮನವಿಗಳು ಸಲ್ಲಿಕೆಯಾಗಿವೆ. ಇನ್ನು ನಾಡಿನಾದ್ಯಂತ ಸಲ್ಲಿಕೆಯಾದ ಮನವಿಗಳು ಲೆಕ್ಕವಿಲ್ಲದಷ್ಟು ಎಂಬುದು ಗಮನಾರ್ಹ.
ಶಾಸಕರಿಗೆ 672 ಅರ್ಜಿ: ರಾಜ್ಯದ 224 ಶಾಸಕರಿಗೆ 3 ಬಾರಿ ಅಂದರೆ 672, 28 ಸಂಸದರಿಗೆ 5 ಬಾರಿ ಅಂದರೆ 140 ಸೇರಿ ಶಾಸಕರು-ಸಂಸದರಿಗೆ ಸಲ್ಲಿಸಿದ್ದು 812 ಮನವಿ ಪತ್ರ. ನರಗುಂದ ತಹಶೀಲ್ದಾರ್ಗೆ 50,ಗದಗ ಜಿಲ್ಲಾಧಿ ಕಾರಿಗೆ 40ಕ್ಕೂ ಮೇಲ್ಪಟ್ಟು ಮನವಿ ಸಲ್ಲಿಸಿದ ರೈತರು, ಅಧಿಕಾರಗಳೇ ನೀವಾದರೂ ಸರ್ಕಾರಗಳಿಗೆ ನಮ್ಮ ಮೊರೆ ತಲುಪಿಸಿ ಎಂದು ಗೋಗರೆದಿದ್ದಾರೆ.
ದಯಾಮರಣಕ್ಕೆ 1500 ಅರ್ಜಿ: ಇನ್ನೊಂದೆಡೆ ಮಹದಾಯಿ ಹೋರಾಟಗಾರರು ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಚಳವಳಿ ನಡೆಸಿದ್ದು, ಹೋರಾಟದ ಮತ್ತೂಂದು ಮೈಲಿಗಲ್ಲು. ಜು.16ರಂದು ದಯಾಮರಣ ಪತ್ರ ಚಳವಳಿಗೆ ಚಾಲನೆ ನೀಡಿ ಎಂದು 880 ಪತ್ರ ಅಂಚೆ ಮೂಲಕ ರವಾನಿಸಲಾಗಿದೆ. ಇದರ ಜತೆಗೆ ದಯಾಮರಣಕ್ಕೆ ಇಲ್ಲಿವರೆಗೂ 1500ಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದಾರೆ. ಒಟ್ಟಾರೆ ರೈತರಿಂದ ಸಲ್ಲಿಕೆಯಾದ ಒಟ್ಟು ಮನವಿಗಳು 2 ಸಾವಿರ ಗಡಿದಾಟಿವೆ. ಇದು ಹೋರಾಟದ ಗಂಭೀರತೆಗೆ ಸಾಕ್ಷಿಯಾಗಿದೆ. ಜು.21ರ ರೈತ ಹುತಾತ್ಮ ದಿನಾಚರಣೆಯಂದು ಹೋರಾಟ 1102 ದಿನಕ್ಕೆ ತಲುಪಲಿದೆ.
ಮೂರು ವರ್ಷಗಳುದ್ದಕ್ಕೂ 2 ಸಾವಿರಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದರೂ ರೈತರ ಬೇಡಿಕೆಗೆ ಬೆಲೆಯಿಲ್ಲ. ದೇಶದ ಅ ಧಿಕಾರ ಚುಕ್ಕಾಣಿ ಹಿಡಿದವರೆಲ್ಲರಿಗೂಮನವಿ ಸಲ್ಲಿಸಿ ನೀರಿಗಾಗಿ ಹಾತೊರೆದಿದ್ದೇವೆ. ಇನ್ನು ಆ ನ್ಯಾಯ ದೇವತೆಯೇ ನಮ್ಮ
ಅಳಲು ಆಲಿಸಬೇಕು.
– ವೀರೇಶ ಸೊಬರದಮಠ ಸ್ವಾಮೀಜಿ, ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ
ಯಾರಿಗೆ, ಎಷ್ಟು ಮನವಿ ಸಲ್ಲಿಕೆ ?
12 ಪ್ರಧಾನಿ ನರೇಂದ್ರ ಮೋದಿ
05 ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
03 ರಾಷ್ಟ್ರಪತಿ ರಾಮನಾಥ ಕೋವಿಂದ
02 ನ್ಯಾಯಾಧಿಕರಣ ಮುಖ್ಯಸ್ಥ ನ್ಯಾ.ಪಂಚಾಳ
03 ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
02 ಎಐಸಿಸಿ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂ ಧಿ
30 ಮಾಜಿ ಸಿಎಂ ಸಿದ್ದರಾಮಯ್ಯ
10 ರಾಜ್ಯಪಾಲ ವಜುಬಾಯಿ ವಾಲಾ
16 ಸಿಎಂ ಕುಮಾರಸ್ವಾಮಿ
– ಸಿದ್ದಲಿಂಗಯ್ಯ ಮಣ್ಣೂರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
Lok Sabha Election; ಇಂದಿನಿಂದ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ