ಮಹದಾಯಿಗಾಗಿ 3 ವರ್ಷದಲ್ಲಿ 1100 ಮನವಿ


Team Udayavani, Jul 21, 2018, 6:00 AM IST

mahadayi-water-dispute.jpg

ನರಗುಂದ: ಜೀವಜಲಕ್ಕಾಗಿ ಹೋರಾಟ ನಡೆಸುತ್ತಲೇ ಇರುವ ಮಹದಾಯಿ ಹೋರಾಟಗಾರರು ಕಳೆದ ಮೂರು ವರ್ಷದಿಂದ
ಇದುವರೆಗೆ ಸಲ್ಲಿಸಿರುವ ಮನವಿಗಳು ಒಂದಲ್ಲ ಎರಡಲ್ಲ. ಬರೋಬ್ಬರಿ 1,100ಕ್ಕೂ ಹೆಚ್ಚು. 

ತಹಶೀಲ್ದಾರರಿಂದ ರಾಜ್ಯಪಾಲರವರೆಗೆ, ಶಾಸಕರಿಂದ ಪ್ರಧಾನಿ-ರಾಷ್ಟ್ರಪತಿವರೆಗೂ ಸೇರಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಮುಖ ಅಧಿಕಾರಸ್ಥರಿಗೆ ಇಷ್ಟೊಂದು ಪ್ರಮಾಣದಲ್ಲಿ ಮನವಿ ಸಲ್ಲಿಸಿಯೂ ವಿವಾದ ಮಾತ್ರ ಇತ್ಯರ್ಥಗೊಂಡಿಲ್ಲ.

ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರ ಹೋರಾಟದ ಹಿಂದೆ ಸಹಿಸಲಾಗದ ನೋವಾಗಿದ್ದು, ಕೇವಲ ನರಗುಂದ ದಿಂದ ಇಷ್ಟು ಮನವಿಗಳು ಸಲ್ಲಿಕೆಯಾಗಿವೆ. ಇನ್ನು ನಾಡಿನಾದ್ಯಂತ ಸಲ್ಲಿಕೆಯಾದ ಮನವಿಗಳು ಲೆಕ್ಕವಿಲ್ಲದಷ್ಟು ಎಂಬುದು ಗಮನಾರ್ಹ.

ಶಾಸಕರಿಗೆ 672 ಅರ್ಜಿ: ರಾಜ್ಯದ 224 ಶಾಸಕರಿಗೆ 3 ಬಾರಿ ಅಂದರೆ 672, 28 ಸಂಸದರಿಗೆ 5 ಬಾರಿ ಅಂದರೆ 140 ಸೇರಿ ಶಾಸಕರು-ಸಂಸದರಿಗೆ ಸಲ್ಲಿಸಿದ್ದು 812 ಮನವಿ ಪತ್ರ. ನರಗುಂದ ತಹಶೀಲ್ದಾರ್‌ಗೆ 50,ಗದಗ ಜಿಲ್ಲಾಧಿ ಕಾರಿಗೆ 40ಕ್ಕೂ ಮೇಲ್ಪಟ್ಟು ಮನವಿ ಸಲ್ಲಿಸಿದ ರೈತರು,  ಅಧಿಕಾರಗಳೇ ನೀವಾದರೂ ಸರ್ಕಾರಗಳಿಗೆ ನಮ್ಮ ಮೊರೆ ತಲುಪಿಸಿ ಎಂದು ಗೋಗರೆದಿದ್ದಾರೆ.

ದಯಾಮರಣಕ್ಕೆ 1500 ಅರ್ಜಿ: ಇನ್ನೊಂದೆಡೆ ಮಹದಾಯಿ ಹೋರಾಟಗಾರರು ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಚಳವಳಿ ನಡೆಸಿದ್ದು, ಹೋರಾಟದ ಮತ್ತೂಂದು ಮೈಲಿಗಲ್ಲು. ಜು.16ರಂದು ದಯಾಮರಣ ಪತ್ರ ಚಳವಳಿಗೆ ಚಾಲನೆ ನೀಡಿ ಎಂದು 880 ಪತ್ರ ಅಂಚೆ ಮೂಲಕ ರವಾನಿಸಲಾಗಿದೆ. ಇದರ ಜತೆಗೆ ದಯಾಮರಣಕ್ಕೆ ಇಲ್ಲಿವರೆಗೂ 1500ಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದಾರೆ. ಒಟ್ಟಾರೆ ರೈತರಿಂದ ಸಲ್ಲಿಕೆಯಾದ ಒಟ್ಟು ಮನವಿಗಳು 2 ಸಾವಿರ ಗಡಿದಾಟಿವೆ. ಇದು ಹೋರಾಟದ ಗಂಭೀರತೆಗೆ ಸಾಕ್ಷಿಯಾಗಿದೆ. ಜು.21ರ ರೈತ ಹುತಾತ್ಮ ದಿನಾಚರಣೆಯಂದು ಹೋರಾಟ 1102 ದಿನಕ್ಕೆ ತಲುಪಲಿದೆ.

ಮೂರು ವರ್ಷಗಳುದ್ದಕ್ಕೂ 2 ಸಾವಿರಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದರೂ ರೈತರ ಬೇಡಿಕೆಗೆ ಬೆಲೆಯಿಲ್ಲ. ದೇಶದ ಅ ಧಿಕಾರ ಚುಕ್ಕಾಣಿ ಹಿಡಿದವರೆಲ್ಲರಿಗೂಮನವಿ ಸಲ್ಲಿಸಿ ನೀರಿಗಾಗಿ ಹಾತೊರೆದಿದ್ದೇವೆ. ಇನ್ನು  ಆ ನ್ಯಾಯ ದೇವತೆಯೇ ನಮ್ಮ
ಅಳಲು ಆಲಿಸಬೇಕು.

– ವೀರೇಶ ಸೊಬರದಮಠ ಸ್ವಾಮೀಜಿ, ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ

ಯಾರಿಗೆ, ಎಷ್ಟು ಮನವಿ ಸಲ್ಲಿಕೆ ?
12 ಪ್ರಧಾನಿ ನರೇಂದ್ರ ಮೋದಿ
05 ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ
03 ರಾಷ್ಟ್ರಪತಿ ರಾಮನಾಥ ಕೋವಿಂದ
02 ನ್ಯಾಯಾಧಿಕರಣ ಮುಖ್ಯಸ್ಥ ನ್ಯಾ.ಪಂಚಾಳ
03 ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ
02 ಎಐಸಿಸಿ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂ ಧಿ
30 ಮಾಜಿ ಸಿಎಂ ಸಿದ್ದರಾಮಯ್ಯ
10 ರಾಜ್ಯಪಾಲ ವಜುಬಾಯಿ ವಾಲಾ
16 ಸಿಎಂ ಕುಮಾರಸ್ವಾಮಿ

– ಸಿದ್ದಲಿಂಗಯ್ಯ ಮಣ್ಣೂರಮಠ

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.