ಉ.ಕ.ಬಂದ್ಗೆ ಹೈಕ ಭಾಗದ ಬೆಂಬಲ ಇಲ್ಲ
Team Udayavani, Jul 31, 2018, 6:10 AM IST
ಕಲಬುರಗಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮುಂಬೈ ಕರ್ನಾಟಕದವರು ಆ.2ರಂದು ಕರೆ
ನೀಡಲಾಗಿರುವ ಬಂದ್ಗೆ ಹೈದ್ರಾಬಾದ್ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಬೆಂಬಲವಿಲ್ಲ ಎಂದು
ಒಕ್ಕೂಟದ ಫರತಾಬಾದ್, ನಂದಕುಮಾರ ನಾಗಭುಜಂಗೆ ತಿಳಿಸಿದ್ದಾರೆ.
3 ದಶಕಗಳಿಂದ ನಮಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುವಾಗ ಮುಂಬೈ ಕರ್ನಾಟಕದ ವರು ಏಲ್ಲಿಗೆ ಹೋಗಿದ್ದರು? ಈಗ ನಮ್ಮ ಹೈದ್ರಾಬಾದ್ ಕರ್ನಾಟಕ ಭಾಗ ನೆನಪಿಗೆ ಬರುತ್ತಿರುವುದೇಕೆ? ಹಲವು ದಶಕಗಳ ನಿರಂತರ ಹೋರಾಟ ಫಲವಾಗಿ ಎಚ್ಕೆಆರ್ ಡಿಬಿ, 371ನೇ ಜೆ ವಿಧಿ ಪಡೆಯಲಾಗಿದೆ.
ಈಗ ಅದರ ಲಾಭ ಪಡೆಯುವಾಗ ಭಾವನಾತ್ಮಕ ವಿಷ ಬೀಜ ಬಿತ್ತಿ ವಿಶೇಷ ಸ್ಥಾನಮಾನದ ಫಲ ಕಬಳಿಸಲು ಯತ್ನಿಸುತ್ತಿದ್ದಾರೆ. ಈ ಧೋರಣೆ ಖಂಡಿಸಿ ಆ.2ರಂದು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ