ಸೆ.22ರಂದು ಚಿಟ್ಟಾಣಿ ಸ್ಮೃತಿಭವನ ಲೋಕಾರ್ಪಣೆ; ನೆರವಿಗೆ ಮನವಿ


Team Udayavani, Aug 2, 2018, 12:19 PM IST

11.jpg

ಹೊನ್ನಾವರ: ಪದ್ಮಶ್ರೀ ಚಿಟ್ಟಾಣಿ ಯಕ್ಷಕಲಾ ಕೇಂದ್ರದ ಮೊದಲ ಹಂತ “ಚಿಟ್ಟಾಣಿ ಸ್ಮೃತಿಭವನ’ವನ್ನು ರಾಮಚಂದ್ರ ಹೆಗಡೆಯವರು ನಿಧನರಾಗಿ ವರ್ಷ ತುಂಬುವ ಸೆಪ್ಟೆಂಬರ್‌ 22ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ರಾಮಚಂದ್ರ ಹೆಗಡೆಯವರ ಧರ್ಮಪತ್ನಿ ಸುಶೀಲಾ ರಾಮಚಂದ್ರ ಹೆಗಡೆ ಮತ್ತು ಮಕ್ಕಳು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕೈದು ವರ್ಷಗಳ ಹಿಂದೆ ರಾಘವೇಶ್ವರ ಶ್ರೀಗಳು ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. ಕಾರಣಾಂತರಗಳಿಂದ ಅಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲೇ ಇಲ್ಲ. ನಿಧನದ 6 ತಿಂಗಳ ಮೊದಲು ಸ್ವತಃ ಚಿಟ್ಟಾಣಿಯವರು ತನ್ನ ಜೀವಿತಾವಧಿಯಲ್ಲಿ ಗಳಿಸಿದ ಪದಕ, ಪ್ರಶಸ್ತಿ, ನೆನಪಿನ ಕಾಣಿಕೆಗಳನ್ನು ಸಿಡಿ ಮತ್ತು ವೇಷಭೂಷಣಗಳನ್ನು ಸಂಗ್ರಹಿಸಿಡಲು ಮನೆಯ ಅಂಗಳದಲ್ಲಿ ಕಟ್ಟಡ ನಿರ್ಮಿಸಲು ಇಚ್ಚೆಪಟ್ಟು ರಾಘವೇಶ್ವರ ಶ್ರೀಗಳ ಮಂತ್ರಾಕ್ಷತೆ ಪಡೆದು ಆರಂಭಿಸಿದ್ದರು. ಕಂಬಗಳು ಮೇಲೇಳುತ್ತಿರುವಾಗಲೇ ಅವರು ವಿಧಿ ವಶರಾದರು. ಅವರ ಇಚ್ಚೆಯಂತೆ ಕಟ್ಟಡ ಕಾರ್ಯವನ್ನು ನನ್ನ ಅಧ್ಯಕ್ಷತೆಯಲ್ಲಿ ಮಕ್ಕಳು ಟ್ರಸ್ಟ್‌ ರಚಿಸಿಕೊಂಡು ಮುಂದುವರಿಸಿದ್ದಾರೆ. ಆರ್‌.ವಿ. ದೇಶಪಾಂಡೆಯವರು, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು, ಕೆನರಾ ಬ್ಯಾಂಕ್‌, ಮಾಜಿ ಶಾಸಕ ಮಂಕಾಳ ವೈದ್ಯ ಮೊದಲಾದವರು ಸುಮಾರು 20ಲಕ್ಷ ರೂಪಾಯಿ ನೀಡಿ ಈ ಕಾರ್ಯಕ್ಕೆ ನೆರವಾಗಿದ್ದಾರೆ.

ಹೆಚ್ಚಿನ ನೆರವು ಕೊಡುವುದಾಗಿ ಹೇಳಿದ್ದಾರೆ. 1ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯೆ ಮೊದಲ ಹಂತ ವಸ್ತು ಸಂಗ್ರಹಾಲಯವನ್ನು ಅವರ ಮೊದಲ ಪುಣ್ಯತಿಥಿ ಸೆಪ್ಟೆಂಬರ್‌ 22, 23 ಬರಲಿದ್ದು ಈ ಮುಹೂರ್ತದಲ್ಲಿ ಅವರ ಅಮೂಲ್ಯ ವಸ್ತುಗಳನ್ನು ನೂತನ ಕಟ್ಟಡದಲ್ಲಿಟ್ಟು ಸಾಂಕೇತಿಕ ಉದ್ಘಾಟಿಸಲಾಗುವುದು. ಮಹಡಿಯ ಮೇಲೆ ಯಕ್ಷಗಾನ ಅಧ್ಯಯನಕ್ಕೆ, ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡುವ ಆಸೆ ಇದೆ. ಆದ್ದರಿಂದ ಚಿಟ್ಟಾಣಿಯವರ ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಅವರು ಹೇಳಿದ್ದಾರೆ. ಚಿಟ್ಟಾಣಿಯವರ ಮಕ್ಕಳಾದ ನರಸಿಂಹ, ನಾರಾಯಣ, ಮಗಳು ಲಲಿತಾ, ಅಳಿಯ ಗಣಪತಿ ಹೆಗಡೆ, ಅಭಿಮಾನಿ ಡಾ| ಜಿ.ಎ.ಹೆಗಡೆ ಸೋಂದಾ ಇದ್ದರು.

ನೆರವಿಗೆ ಮನವಿ
ಸಹಾಯ ಮಾಡಬಯಸುವವರುಶ್ರೀಮತಿ ಸುಶೀಲಾ ರಾಮಚಂದ್ರ ಹೆಗಡೆ ಚಿಟ್ಟಾಣಿ, ಅಧ್ಯಕ್ಷರು, ಪದ್ಮಶ್ರೀ ಚಿಟ್ಟಾಣಿ ಯಕ್ಷಕಲಾ ಕೇಂದ್ರ ಟ್ರಸ್ಟ್‌ (ರಿ.), ಗುಡೇಕೇರಿ, ಹೇರಂಗಡಿ, ತಾ| ಹೊನ್ನಾವರ ಈ ವಿಳಾಸಕ್ಕೆ ಅಥವಾ ಹೊನ್ನಾವರ ಕೆನರಾ ಬ್ಯಾಂಕ್‌ ಶಾಖೆ ಉಳಿತಾಯ ಖಾತೆ ನಂಬರ್‌ 1067101039835  MDTA ನಂಬರ್‌ :AKS@0001067 ಜಮಾ ಮಾಡಿ ತಿಳಿಸಬಹುದು. 9482932306 ಸಂಪರ್ಕಿಸಬಹುದು.

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.