ಸಾಲಮನ್ನಾ ಮರೆತಿಲ್ಲ, ನಾನೇನು ಹಣದ ಗಿಡ ನೆಟ್ಟಿಲ್ಲ; CM ಕುಮಾರಸ್ವಾಮಿ
Team Udayavani, Aug 9, 2018, 3:53 PM IST
ಬೆಂಗಳೂರು:ರಾತ್ರೋ ರಾತ್ರಿ ರೈತರ ಖಾತೆಗೆ ಹಣ ಹಾಕಲು ಆಗಲ್ಲ. ನನ್ನ ಕಷ್ಟ ನನಗೇ ಗೊತ್ತು ನಾನು ಹಣದ ಗಿಡ ನೆಟ್ಟಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಗುರುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ರೈತರ ಸಾಲಮನ್ನಾ ವಿಚಾರ ಮರೆತಿಲ್ಲ. ನನ್ನ ನೋವನ್ನು ನಾನು ಹೇಳಿಕೊಳ್ಳುವಂತಿಲ್ಲ. ಸಾಲ ಮನ್ನಾ ವಿಚಾರದಲ್ಲಿ ನಾನು ಅಧಿಕಾರಿಗಳನ್ನು ಒಪ್ಪಿಸಬೇಕಿದೆ ಎಂದರು.
ಇಂದಿನ ಸಂಪುಟ ಸಭೆಯಲ್ಲೂ ಸಾಲಮನ್ನಾದ ಚರ್ಚೆ ಮಾಡುತ್ತೇನೆ. ಸಾಲಮನ್ನಾಕ್ಕೆ ಎಷ್ಟು ತರ್ಲೆ, ತಾಪತ್ರೆ ಇದೆ ಎಂದು ಗೊತ್ತು. ನಾನು ರೈತರ ಸಾಲಮನ್ನಾದ ವಿಚಾರದಲ್ಲಿ ಹುಡುಗಾಟ ಆಡುತ್ತಿಲ್ಲ ಎಂದು ತಿಳಿಸಿದರು.