ಧರ್ಮವೇ ಭಾರತದ ವಿಶೇಷತೆ: ಭಾಗವತ್
Team Udayavani, Aug 16, 2018, 6:55 AM IST
ಬೆಂಗಳೂರು: ಭಾರತ ಧಾರ್ಮಿಕ ರಾಷ್ಟ್ರವಾಗಿದ್ದು, ಧರ್ಮವೇ ನಮ್ಮ ಸತ್ವ ಮತ್ತು ವಿಶೇಷತೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.
ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಯಲ್ಲಿ ಬುಧವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ
ಮಾತನಾಡಿದ ಅವರು, ಭಾರತ ಎಂದರೆ ಕೇವಲ ಭೌಗೋಳಿಕ ವಿಚಾರ ಮಾತ್ರವಲ್ಲ,ಅದು ಸಂಸ್ಕೃತಿ, ಪ್ರಕೃತಿಗಳ ಪ್ರತೀಕ.
ದೇಶದ ವಿಶೇಷವೇ ಧರ್ಮವಾಗಿದ್ದರಿಂದ ವಿಚಾರ ಮತ್ತು ಆಚರಣೆಗಳಲ್ಲಿ ವಿಶ್ವದಲ್ಲೇ ವಿಶಿಷ್ಟ ಸ್ಥಾನಮಾನ ಹೊಂದಿದೆ.
ಭಾರತ ಧಾರ್ಮಿಕ ರಾಷ್ಟ್ರ ಎಂಬುದರ ಪ್ರತೀಕವೇ ತ್ರಿವಣ ಧ್ವಜದಲ್ಲಿರುವ ಧರ್ಮಚಕ್ರ ಎಂದರು.
ಬುದ್ಧ ತನ್ನ ಧರ್ಮದ ಸಂಪ್ರದಾಯ ಧಮ್ಮದ ಪ್ರತೀಕವಾಗಿ ಧರ್ಮಚಕ್ರ ಸ್ಥಾಪಿಸಿದ್ದ. ಪರೋಕಾರ, ನಮ್ಮ ಜೀವನದಿಂದ ಬೇರೆಯವರಿಗೆ ಉಪಯೋಗವಾಗಬೇಕು, ಯಾರೂ ಪಾಪ ಮಾಡಬಾರದು, ಶಾಂತಿಯಿಂದ ಜೀವನ ನಡೆಸಬೇಕು ಎಂಬುದೇ ಧರ್ಮ ಚಕ್ರದ ಅಂಶ ಎಂದು ತಿಳಿಸಿದರು.
ಶ್ರೀರಾಮ ನಮ್ಮ ಆದರ್ಶ: ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಆ ರಾಷ್ಟ್ರವನ್ನಾಳಿದ ರಾಜರನ್ನು ಆದರ್ಶ ಪುರುಷರು ಎಂದು ಪರಿಗಣಿಸುತ್ತಾರೆ.
ಕೆಲವು ರಾಷ್ಟ್ರಗಳಲ್ಲಿ ಚೆಂಗೀಸ್ ಖಾನ್, ತೈಮೂರ್, ಹಿಟ್ಲರ್ ಮುಂತಾದವರನ್ನು ಆದರ್ಶ ಎಂದು ಪರಿಗಣಿಸುತ್ತಾರೆ.
ಭಾರತವೂ ರಾಜವಂಶಸ್ಥರಿಂದಲೇ ಕೂಡಿದ್ದರೂ ನಾವು ಆದರ್ಶ ಎಂದು ಭಾವಿಸುವುದು ಪಿತೃ ವಾಕ್ಯ ಪರಿಪಾಲನೆಗಾಗಿ ವನವಾಸ ತೆರಳಿದ ಶ್ರೀರಾಮನನ್ನು, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ರಾಣಾ ಪ್ರತಾಪ್ ನನ್ನು, ಯಾವುದೇ ಅಧಿಕಾರ
ಹೊಂದಿರದೇ ಇದ್ದ ಸ್ವಾಮಿ ವಿವೇಕಾನಂದರನ್ನು ಇದು ವಿಶ್ವದ ಇತರೆ ರಾಷ್ಟ್ರಗಳಿಗೂ ಭಾರತಕ್ಕೂ ಇರುವ ವ್ಯತ್ಯಾಸ ಎಂದು ಹೇಳಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನ.ದಿನೇಶ್ ಹೆಗ್ಡೆ, ಆರ್ಎಸ್ಎಸ್ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕ ವಿ.ನಾಗರಾಜ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’