ಉಟ್ಟ ಬಟ್ಟೆಯಲ್ಲೇ ಬಂದರು: ಎಲ್ಲ ಕಳೆದುಕೊಂಡು ನೊಂದು,ಬೆಂದರು
Team Udayavani, Aug 20, 2018, 6:00 AM IST
ಮಡಿಕೇರಿ: ಮಕ್ಕಂದೂರು ಗ್ರಾಮದ ತಂತಿಪಾಲ ಗ್ರಾಮದಲ್ಲಿ ಮಡ್ಲಂಡ ಕುಟುಂಬದ ಹಲ ಕುಟುಂಬಗಳು ವಾಸವಿದ್ದು, ಕೃಷಿ ಚಟುವಟಿಕೆಗಳ ಮೂಲಕ ಬದುಕು ಕಟ್ಟಿ ಕೊಂಡಿದ್ದವು. ಸುರಿದ ಭಾರೀ ಗಾಳಿ ಮಳೆ ಅವರೆಲ್ಲರ ಕನಸುಗಳನ್ನು ಕಿತ್ತು ಕೊಂಡಿದೆ ರಾತೋರಾತ್ರಿ ಕೆಲ ಮಂದಿ, ಕಣ್ಣೆದುರಿಗಿದ್ದ ಗುಡ್ಡ ಕುಸಿದು ತಮ್ಮ ಮನೆ, ತೋಟಗಳನ್ನು ಆಪೋಶನ ತೆಗೆದುಕೊಳ್ಳುವುದನ್ನು ಕಂಡು ತೀವ್ರ ಆತಂಕಕ್ಕೆ ಸಿಲುಕಿ, ರಾತ್ರೋರಾತ್ರಿ ಅರಣ್ಯ ಭಾಗಗಳಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಅಂದಾಜು ಐದಾರು ಕಿ.ಮೀ. ನಡೆದು ಕಾಲೂರಿಗೆ ಬಂದು, ಬಳಿಕ ಮಡಿಕೇರಿಗೆ ಬಂದು ಇದೀಗ ಮೈತ್ರಿ ಹಾಲ್ನ ಗಂಜಿ ಕೇಂದ್ರÅದಲ್ಲಿ ತಾತ್ಕಾಲಿಕ ನೆಲೆ ಕಂಡು ಕೊಂಡಿದ್ದಾರೆ.
ರಕ್ಷಿಸುವ ಕಾರ್ಯ ಮುಂದುವರಿಕೆ
ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಮುಂದುವರೆದಿದ್ದು, ಪರಿಸ್ಥಿತಿ ಆಡಳಿತದ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕಲ್ಪನಾ ಠಿಕಾಣಿ ಹೂಡಿದ್ದು, ಕಾನೂನು ವಿಭಾಗದ ಎಡಿಜಿಪಿ ಬಿ.ಭಾಸ್ಕರ್ ರಾವ್ ಕೂಡ ಭಾನುವಾರದಿಂದ ಜಿಲ್ಲೆಯಲ್ಲಿ ರಕ್ಷಣಾ ಉಸ್ತುವಾರಿ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶಿಬಿರಗಳಲ್ಲಿ ಸಮಸ್ಯೆ ಉಂಟಾಗದಂತೆ ಎಲ್ಲಾ ವಸ್ತುಗಳನ್ನು ಒದಗಿಸಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ