ಒಡೆಯನಿಲ್ಲದ ಮನೆ ಕಾಯುತ್ತಿರುವ ನಾಯಿ, ಕೋಳಿ!
Team Udayavani, Aug 23, 2018, 6:00 AM IST
ಮಡಿಕೇರಿ: ಹಟ್ಟಿಹೊಳೆ ಸಮೀಪದ ಅನೇಕ ಮನೆಗಳಿಗೆ ಜಲ ಪ್ರವಾಹದಿಂದ ನೀರು ನುಗ್ಗಿದೆ. ಮನೆಯಲ್ಲಿದ್ದವರು ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಮನೆ ಮುಂದೆ ಕೋಳಿ, ನಾಯಿಗಳು ನಿಂತಿವೆ.
ಮಾದಪುರದಿಂದ ಹಟ್ಟಿಹೊಳೆ ಮಾರ್ಗದಲ್ಲಿ ಸಿಗುವ ಸೇತುವೆಯ ಬಲಕ್ಕೆ ಸಾಗುವ ದಾರಿಯಲ್ಲಿ ಹತ್ತಾರು ಮನೆಗಳು ಸಿಗುತ್ತದೆ. ಆಗಸ್ಟ್ ಮೊದಲೆರೆಡು ವಾರದಲ್ಲಿ ಸುರಿದ ಭಾರಿ ಮಳೆಗೆ ಹಟ್ಟಿಹೊಳೆ ಉಕ್ಕಿ ಹರಿದು ಬಹುತೇಕ ಎಲ್ಲ ಮನೆಗೂ ನೀರು ನುಗ್ಗಿದೆ. ಕೆಲವು ಮನೆಗಳೇ ಕುಸಿದು ಬಿದ್ದರೆ ಇನ್ನು ಕೆಲವು ಮನೆಯೊಳಗೆ ಎರಡುವರೆ ಮೂರು ಅಡಿ ಎತ್ತರದಷ್ಟು ಹೂಳು ತುಂಬಿಕೊಂಡಿದೆ. ಮನೆಯೊಳಗೆ ಹಾವುಗಳು ಸೇರಿಕೊಂಡಿವೆ.
ಮನೆ ಕಾಯುತ್ತಿರುವ ನಾಯಿ, ಕೋಳಿ!
ಮನೆಯಲ್ಲಿ ಜನರಿಲ್ಲ ಆದರೆ ನಾಯಿ, ಕೋಳಿಗಳು ಮನೆಬಿಟ್ಟು ಹೋಗಿಲ್ಲ. ಮನೆಯ ಅಂಗಳದಲ್ಲೇ ಓಡಾಡಿಕೊಂಡು ಮನೆಯ ಯಜಮಾನನ ಬರುವಿಕೆಗೆ ಕಾಯುತ್ತಿವೆ.
ಹಟ್ಟಿಹೊಳೆ ಸುತ್ತಮುತ್ತಲ ಜನರು ನಾಟಿಕೋಳಿ, ಗಿರಿರಾಜ, ಬಾತು ಕೋಳಿ ಹೀಗೆ ವಿವಿಧ ರೀತಿಯ ಕೋಳಿಗಳನ್ನು ಸಾಕಿಕೊಂಡಿದ್ದರು. ಮನೆಯಲ್ಲಿದ್ದವರು ನಿರಾಶ್ರಿತ ಕೇಂದ್ರದಲ್ಲಿರವುದರಿಂದ ಈಗ ಕೋಳಿ ನಾಯಿಗಳು ಮನೆಯ ಎದುರು ಬೆಳಗ್ಗಿನಿಂದ ಸಂಜೆಯ ತನಕ ಕಾದು ಕುಳಿದಿರುವ ದೃಶ್ಯ ಮನಕಲುಕುತ್ತದೆ. ಜತೆಗೆ ಇವುಗಳಿಗೆ ಆಹಾರವೂ ಸಿಗುತ್ತಿಲ್ಲ.
ಗುಡ್ಡದಡಿ ಬೆಕ್ಕು
ಹಟ್ಟಿಹೊಳೆ ಮಡಿಕೇರಿ ರಸ್ತೆಯಲ್ಲಿ ಗುಡ್ಡ ಕುಸಿದಾಗ ಅದರೊಳಗೆ ಸಿಕ್ಕಿಹಾಕಿಕೊಂಡಿದ್ದ ಬೆಕ್ಕೊಂದನ್ನು ಬುಧವಾರ ಸಂರಕ್ಷಿಸಲಾಗಿದೆ. ಉಮೇಶ್ ಅವರ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಾಗ ಬೆಕ್ಕು ಅದರೊಳಗೆ ಸಿಕ್ಕಿಹಾಕಿಕೊಂಡಿತ್ತು. ಬೆಕ್ಕು ಕಪಾಟಿನ ಮಧ್ಯಭಾಗದಲ್ಲಿದ್ದರಿಂದ ಏನೂ ತೊಂದರೆ ಆಗಿರಲಿಲ್ಲ. ಬುಧವಾರ ಗುಡ್ಡ ಅಗೆಯುತ್ತಿರುವಾಗ ಬೆಕ್ಕಿನ ಕೂಗು ಕೇಳಿಸಿತು. ನಂತರ ಅದನ್ನು ರಕ್ಷಿಸಿದೆವು ಎಂದು ಮಂಜುನಾಥ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ