ನಿರಾಶ್ರಿತರ ಕೇಂದ್ರದಲ್ಲಿ ಪೊಲೀಸರ ಕೊರತೆ
Team Udayavani, Aug 27, 2018, 6:55 AM IST
ಮಡಿಕೇರಿ: ನಿರಾಶ್ರಿತರ ಶಿಬಿರದ ರಕ್ಷಣೆ ಸೇರಿ ವಿವಿಧ ಕಾರ್ಯಗಳ ನಿಯೋಜನೆಗೆ ಪೊಲೀಸರ ಕೊರತೆ ಎದುರಾಗಿದೆ.
ನಿರಾಶ್ರಿತರ ಶಿಬಿರದಲ್ಲಿ ಹೋಂಗಾರ್ಡ್ ಸಹಿತಐವರು ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಭಾಗದಲ್ಲಿ ಇರುವ ತಾತ್ಕಾಲಿಕ ಪೊಲೀಸ್ ಚೌಕಿಯಲ್ಲಿ ಇಬ್ಬರು ಪೊಲೀಸರನ್ನು ಮಾತ್ರ ನೇಮಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸಚಿವರು ಸಂತ್ರಸ್ತರ ಭೇಟಿ, ಪರಿಹಾರ ಕಾರ್ಯದ ಪರಿಶೀಲನೆಗೆ ಬಂದಾಗ ಅವರ ಭದ್ರತೆಗಾಗಿಯೂ ಪೊಲೀಸ್ ಸಿಬ್ಬಂದಿ ಇಲ್ಲದಂತಾಗಿದೆ. ನಿರಾಶ್ರಿತರ ಕೇಂದ್ರಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿರಾಶ್ರಿತರನ್ನು ನೋಡಲು ಬರುತ್ತಿದ್ದೇವೆ ಎಂದು ಹೇಳಿ ಇಲ್ಲಿನ ಸವಲತ್ತು ಪಡೆಯುವವರು ಇದ್ದಾರೆ. ಹಾಗೆಯೆ, ಶಿಬಿರದಲ್ಲಿ ಕಳ್ಳತನವೂ ಹೆಚ್ಚಾಗುತ್ತಿದೆ ಎಂದು ಮೈತ್ರಿ ಕೇಂದ್ರದಲ್ಲಿ ಇರುವ ಸುರೇಶ್ ಆತಂಕ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ರಜೆ ಇಲ್ಲ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿ ಬಹುತೇಕ ಎಲ್ಲಾ ಅಧಿಕಾರಿಗಳು ರಜಾ ದಿನವಾದ ಭಾನುವಾರವೂ ಕೆಲಸ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು