ಮುಳುಗೆದ್ದ ಕೊಡಗಲ್ಲಿ ಮೊದಲ ಶುಭ ಸಮಾರಂಭ


Team Udayavani, Aug 27, 2018, 6:00 AM IST

marriage5.jpg

ಮಡಿಕೇರಿ: ದಾಖಲೆ ಮಳೆಯಿಂದ ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ನೊಂದಿದ್ದ ಕೊಡಗಿನಲ್ಲಿ ಹತ್ತು ದಿನದ ನಂತರ ಮೊದಲ ಶುಭ ಸಮಾರಂಭಕ್ಕೆ ಭಾನುವಾರ ಸಾಕ್ಷಿಯಾಯಿತು.

ಮನೆ, ಜಮೀನು ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿದ್ದ  ಯುವತಿ ಭಾನುವಾರ ಹಸೆಮಣೆ ಏರುವಾಗ ಇಡೀ ಶಿಬಿರವೇ ಸಂತಸಗೊಂಡಿತು. ಸೇವಾ ಭಾರತಿ ಮತ್ತು ಮಡಿಕೇರಿ ಲಯನ್ಸ್‌ ಕ್ಲಬ್‌ ನೆರವಿನೊಂದಿಗೆ ಮಕ್ಕಂದೂರು ನಿವಾಸಿ ಬೇಬಿಯವರ ಮಗಳು ಆರ್‌. ಮಂಜುಳಾ ಹಾಗೂ ಕೇರಳದ ಕಣ್ಣೂರಿನ ರಜೀಶ್‌ ಎಂಬುವರನ್ನು ವರಿಸಿದರು.

ಕಳೆದ ವರ್ಷವೇ  ಮದುವೆ ನಿಶ್ಚಿತಾರ್ಥವಾಗಿತ್ತು. ಆ.26ರಂದು ಮಕ್ಕಂದೂರಿನ ವಿ.ಎಸ್‌.ಎಸ್‌.ಎನ್‌. ಹಾಲ್‌ನಲ್ಲಿ ಮದುವೆ ನಿರ್ಧರಿಸಿದ್ದರು. ಆಷಾಢ ತಿಂಗಳು ಬರುವ ಮೊದಲೇ ಎಲ್ಲರಿಗೂ ಮದುವೆ ಆಮಂತ್ರಣ ಪತ್ರಿಕೆ ವಿತರಿಸಿದ್ದರು.

ಆದರೆ, ದಿಢೀರ್‌ ಎದುರಾದ ಅನಾಹುತದಿಂದ ಬೇಬಿಯರ ಮನೆ ಸಂಪೂರ್ಣ ನಾಶವಾಗಿ ಇಡೀ ಕುಟುಂಬ ನಿರಾಶ್ರಿತರ ಶಿಬಿರದಲ್ಲಿದೆ. ಇದರಿಂದಾಗಿ ಮದುವೆ ಆಗುತ್ತದೆಯೋ  ಇಲ್ಲವೋ ಎಂಬ ಆತಂಕದಲ್ಲಿದ್ದಾಗ  ಸೇವಾ ಭಾರತಿ ಮತ್ತು ಮಡಿಕೇರಿ ಲಯನ್ಸ್‌ ಕ್ಲಬ್‌ ಮುಂದಾಗಿ ನಿಗದಿತ ದಿನದಂದಲೇ ಮದುವೆ ಮಾಡಿಸಿದೆ.

ಪೂರ್ವ ನಿಗದಿಯ ದಿನದಂದೇ ಮದುವೆ ನಡೆಸಲು ನಿರ್ಧರಿಸಿದ ಸೇವಾ ಭಾರತಿ ಮತ್ತು ಲಯನ್ಸ್‌ ಕ್ಲಬ್‌ನ  ಸದಸ್ಯರು, ಭಾನುವಾರ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋತ್ತರವಾಗಿ ಮದುವೆ ಕಾರ್ಯ ನಡೆಸಿದರು.

ಮದುವೆಗಾಗಿ ದೇವಸ್ಥಾನ ಮತ್ತು ನಿರಾಶ್ರಿತರ ಶಿಬಿರದ ಮುಂಭಾಗವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಕೇರಳದ ಕಣ್ಣೂರಿನ ರಜೀಶ್‌ ಭಾನುವಾರ ಬೆಳಗ್ಗೆಯೇ ಕುಟುಂಬ ಸಮೇತರಾಗಿ ಮಡಿಕೇರಿಗೆ ಬಂದಿದ್ದರು. ವಧು ಮತ್ತು ವರನಿಗೆ ಶಿಬಿರದಲ್ಲೇ ಮದುವೆ ಅಲಂಕಾರ ಮಾಡಲಾಗಿತ್ತು. ವಧುವಿಗೆ ಶನಿವಾರ ರಾತ್ರಿ ಶಿಬಿರದ ಸದಸ್ಯರೇ ಸುಂದರವಾಗಿ ಮೆಹಂದಿ ಹಚ್ಚಿದ್ದರು.

ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶಿಬಿರದಿಂದ ಕಾಲ್ನಡಿಗೆಯಲ್ಲಿ ಹೊರಟ ಮದುವೆ ದಿಬ್ಬಣ, 10.30 ಸುಮಾರಿಗೆ ದೇವಸ್ಥಾನ ತಲುಪಿತ್ತು. ಓಂಕಾರೇಶ್ವರ ದೇವಸ್ಥಾನದಲ್ಲಿ ರಜೀಶ್‌, ಮಂಜುಳಾ ಅವರಿಗೆ ಮಂಗಳ ಸೂತ್ರ ಕಟ್ಟಿದರು.

ಅಲ್ಲಿಂದ ದಿಬ್ಬಣ ನೇರವಾಗಿ ಓಂಕಾರ ಸದನದ ನಿರಾಶ್ರಿತರ ಶಿಬಿರಕ್ಕೆ ಹೊರಟಿತು. ಮದುವೆ ನಿಮಿತ್ತ ನಿರಾಶ್ರಿತರಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ವಧು ವರನ ಕುಟುಂಬದ ಜತೆ  ಕಣ್ಣೂರಿಗೆ ಹೊರಟರು.

ನಿರಂತರ ಸುರಿದ ಭಾರಿ ಮಳೆಗೆ ಬೇಬಿಯರ ಮನೆ ಕೊಚ್ಚಿಹೋಗಿ ಇಡೀ ಕುಟುಂಬ ನಿರಾಶ್ರಿತರ ಶಿಬಿರ ಸೇರಿದೆ. ಯಾವುದೇ ಕಾರಣಕ್ಕೂ ಶುಭಕಾರ್ಯ ನಿಲ್ಲಬಾರದು ಎಂಬ ಉದ್ದೇಶದಿಂದ ಸೇವಾ ಭಾರತಿ ಹಾಗೂ ಲಯನ್ಸ್‌ ಕ್ಲಬ್‌ವತಿಯಿಂದ ಪೂರ್ವ ನಿಗದಿಯಾದ ದಿನಾಂಕದಂದೇ(ಆ.26) ಮದುವೆ ನಡೆಸಲು ನಿರ್ಧರಿಸಿ, ಶಾಸ್ತ್ರೋತ್ತರವಾಗಿ ಮದುವೆ ನಡೆಸಿದ್ದೇವೆ.
– ಕೆ.ಕೆ.ದಾಮೋದರ,  ಲಯನ್ಸ್‌ ಕ್ಲಬ್‌ ಅಧ್ಯಕ್ಷ

ಮಳೆಗೆ ಮನೆ ಕಳೆದುಕೊಂಡಿದ್ದರಿಂದ ಮದುವೆ ನಡೆಯುತ್ತದೆ ಎಂದುಕೊಂಡಿರಲಿಲ್ಲ. ಎಲ್ಲವನ್ನು ಕೆಳೆದುಕೊಂಡಿರುವ ನಮಗೆ ಈ ಸಂಸ್ಥೆಗಳು ಸಹಕಾರ ನೀಡಿವೆ. ನೋವಿನಲ್ಲೂ ಸಂತೋಷವಾಗುತ್ತಿದೆ.
– ಮಂಜುಳಾ, ವಧು

ಮದುವೆಗಾಗಿ ಎರಡು ಲಕ್ಷ ರೂ. ಸಾಲ ಮಾಡಿದ್ದೇವೆ. ಒಡವೆಯನ್ನು ಮಾಡಿಸಿದ್ದೆವು. ಮಳೆಗೆ ಮನೆ ನಾಶವಾಗಿದ್ದರಿಂದ ಮದುವೆ ಕೂಡಿಟ್ಟ ಹಣವೂ ಸಿಕ್ಕಿಲ್ಲ. ಭಾವನ ಕಡೆಯುವರಿಗೆ ವಿಷಯ ಮನವರಿಕೆ ಮಾಡಿಕೊಟ್ಟಿದ್ದರಿಂದ ಯಾವುದೇ ಆಕ್ಷೇಪ ಇಲ್ಲದೆ ಮದುವೆಗೆ ಒಪ್ಪಿಕೊಂಡಿದ್ದಾರೆ.
– ಆರ್‌.ಅಣ್ಣಪ್ಪ, ವಧು ಸಹೋದರ.
                    
ಚಿತ್ರ: ಎಚ್‌.ಫ‌ಕ್ರುದ್ದೀನ್‌
– ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.