ವಿಮಾನ ನಿಲ್ದಾಣದಿಂದ ತಿರುಪತಿಗೆ ನೇರ ಬಸ್
Team Udayavani, Aug 28, 2018, 12:08 PM IST
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್), ತಿರುಪತಿ ನಡುವಿನ ನೇರ ಫ್ಲೈಬಸ್ ಸೇವೆಗೆ ಕೆಎಸ್ಆರ್ಟಿಸಿ ಮತ್ತು ಕೆಐಎಎಲ್ ಅಧಿಕಾರಿಗಳು ಸೋಮವಾರ ಚಾಲನೆ ನೀಡಿದರು.
ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ದೇಶ, ವಿದೇಶಗಳಿಂದ ಬರುವ ಪ್ರಯಾಣಿಕರು ಮೊದಲು ವಿಮಾನ ನಿಲ್ದಾಣಕ್ಕೆ ಬಂದು, ನಂತರ ಮೆಜೆಸ್ಟಿಕ್ ಮೂಲಕ ತಿರುಪತಿಗೆ ತೆರಳಬೇಕಿತ್ತು. ಇದರಿಂದ ಪ್ರಯಾಣಿಕರ ಸಾಕಷ್ಟು ಸಮಯ ವ್ಯರ್ಥವಾಗುವುದನ್ನು ಮನಗೊಂಡ ಕೆಐಎಎಲ್ ಅಧಿಕಾರಿಗಳು, ಕೆಎಸ್ಸಾರ್ಟಿಸಿ ಸಹಕಾರದೊಂದಿಗೆ ತಿರುಪತಿಗೆ ನೇರ ಫ್ಲೈ ಬಸ್ ಸೇವೆ ಆರಂಭಿಸಿದ್ದಾರೆ.
ಈ ವೇಳೆ ಮಾತನಾಡಿದ ಕೆಎಸ್ಆರ್ಟಿಸಿ ಡಿಟಿಒ ಅಧಿಕಾರಿ ಶ್ರೀಕಾಂತ್, ಕೆಐಎಎಲ್ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕೆಐಎಎಲ್ನಿಂದ ತಿರುಪತಿಗೆ ಪ್ರತಿ ದಿನ ಬೆಳಗ್ಗೆ 10 ಗಂಟೆ ಹಾಗೂ ರಾತ್ರಿ 10 ಗಂಟೆಗೆ ಫ್ಲೈ ಬಸ್ಗಳು ಹೊರಡಲಿವೆ. ಹಾಗೇ ತಿರುಪತಿಯಿಂದ ಕೆಐಎಎಲ್ಗೆ ಬೆಳಗ್ಗೆ 11 ಗಂಟೆ ಹಾಗೂ ರಾತ್ರಿ 9 ಗಂಟೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಫ್ಲೈ ಬಸ್ನ ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜರ್, ವಿಮಾನದಲ್ಲಿ ಇರುವಂತೆ ಸೀಟ್ ಲೈಟ್ ಹಾಗೂ ಎಸಿ ವ್ಯವಸ್ಥೆ ಇರುತ್ತದೆ. ಒಮ್ಮೆ 48 ಪ್ರಯಾಣಿಕರು ಈ ಬಸ್ನಲ್ಲಿ ಸಂಚರಿಸಬಹುದಾಗಿದ್ದು, ವಿಮಾನ ನಿಲ್ದಾಣದಿಂದ ತಿರುಪತಿಗೆ 800 ರೂ. ದರ ನಿಗದಿ ಮಾಡಲಾಗಿದೆ. ಸೋಮವಾರದಿಂದ 5 ದಿನಗಳ ಕಾಲ ಫ್ಲೈ ಬಸ್ನಲ್ಲಿ ತಿರುಪತಿಗೆ ತೆರಳುವ ಪ್ರಯಾಣಿಕರಿಗೆ 500 ರೂ. ಮೌಲ್ಯದ ಗಿಫ್ಟ್ ವೋಚರ್ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…