ಪ್ರವಾಹದಿಂದ ಆಯುರ್ವೇದ ಉದ್ಯಮಕ್ಕೆ ಹೊಡೆತ


Team Udayavani, Aug 29, 2018, 6:00 AM IST

s-18.jpg

ಹುಬ್ಬಳ್ಳಿ: ಮಹಾಮಳೆಯಿಂದಾಗಿ ಕೇರಳದ ಜನಜೀವನ ಅಸ್ತವ್ಯಸ್ತಗೊಂಡಂತೆ ಸಸ್ಯಸಂಪತ್ತು ಕೂಡ ಹಾಳಾಗಿದೆ. ಆಯುರ್ವೇದ ಔಷಧಗಳ
ತಯಾರಿಕೆಗೆ ಖ್ಯಾತಿ ಪಡೆದಿರುವ ಕೇರಳದಲ್ಲಿ ಆಯುರ್ವೇದ ವನಗಳು ಕೊಚ್ಚಿ ಹೋಗಿದ್ದು, ಇದು ಆಯುರ್ವೇದ ಉದ್ಯಮಕ್ಕೆ ಧಕ್ಕೆ ಉಂಟು
ಮಾಡಿದೆ.

ಉತ್ತರ ಭಾರತದಲ್ಲಿ ಹಿಮಾಲಯ ಆಯುರ್ವೇದ ಸಸ್ಯವೈವಿಧ್ಯ ಸಿಗುವಂತೆ ದಕ್ಷಿಣ ಭಾರತದಲ್ಲಿ ಕೇರಳ ಆಯುರ್ವೇದ ಸಸ್ಯಗಳ ಕಣಜ. ದೇವರನಾಡು ಕೇರಳದಲ್ಲಿ ಸಸ್ಯಸಿರಿ ಮಳೆ ಹಾಗೂ ಭೂ ಕುಸಿತದಿಂದ ಹಾಳಾಗಿದೆ. ಇದರಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಮೇಲೆ ಅವಲಂಬನೆ ಹೆಚ್ಚಾಗಲಿದೆ. ಕೆಲವು ಗಿಡಗಳು ಒಂದು ವರ್ಷದಲ್ಲಿ ಬೆಳೆದು ಫ‌ಲ ನೀಡಿದರೆ, ಇನ್ನು ಕೆಲವು ಹತ್ತಾರು ವರ್ಷ ಮರಗಳಾಗಿ ಬೆಳೆದ ನಂತರ ಆಯುರ್ವೇದ ಔಷಧಗಳಿಗೆ ಬಳಕೆಯಾಗುತ್ತವೆ. ಆಯುರ್ವೇದ ವನಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿಯೇ ಮಳೆಯಿಂದ ಹಾನಿ ಪ್ರಮಾಣ
ಹೆಚ್ಚಾಗಿರುವುದರಿಂದ ಆತಂಕ ಹೆಚ್ಚಾಗಿದೆ. ಆಯುರ್ವೇದಕ್ಕೆ ಆದ್ಯತೆ ನೀಡಿದ ಕೇರಳ ಸರ್ಕಾರ ಆಯುರ್ವೇದವನ್ನು ಪ್ರವಾಸೋದ್ಯಮದ ಭಾಗವಾಗಿಸಿದೆ. ಆಯುರ್ವೇದ ಉತ್ತೇಜನಕ್ಕೆ ಆದ್ಯತೆ ನೀಡುತ್ತಿದೆ. ಮನೆ ಮನೆಯಲ್ಲೂ ಆಯುರ್ವೇದವಿದೆ. ಪಂಚಕರ್ಮ ಚಿಕಿತ್ಸೆಗಾಗಿಯೇ ಕೇರಳಕ್ಕೆ
ಹೋಗುವವರಿದ್ದಾರೆ. ಮತ್ತೆ ಆಯುರ್ವೇದ ಪ್ರವಾಸೋದ್ಯಮ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕು.

ಕೇರಳದಲ್ಲಿ ಹಲವಾರು ಆಯುರ್ವೇದ  ಕಂಪನಿಗಳಿವೆ. ಅವುಗಳಲ್ಲಿ ಕೇರಳ ಆಯುರ್ವೇದ ಫಾರ್ಮಾ ಲಿಮಿಟೆಡ್‌, ಕೊಟ್ಟಾಯಂ ಆಯುರ್ವೇದ, ನಾಗಾರ್ಜುನ ಹರ್ಬಲ್ಸ್‌, ಮಲಬಾರ್‌ ಆಯುರ್ವೇದ, ಆರ್ಯವೈದ್ಯ ನಿಲಯಂ (ಎವಿಎಂ) ಪ್ರಮುಖ ಕಂಪನಿಗಳು. ಕೇರಳದ ಆಯುರ್ವೇದ ಉತ್ಪನ್ನಗಳಿಗೆ ಬ್ರ್ಯಾಂಡ್‌ ವ್ಯಾಲ್ಯು ಇದೆ. ಕೇರಳ ಆಯುರ್ವೇದ ಎಂದೇ ಹಲವು ಆಯುರ್ವೇದ ಔಷಧಗಳ ಮಾರಾಟ ನಡೆಯುತ್ತದೆ. ರಾಜ್ಯದಲ್ಲಿ ಸಹಸ್ರಾರು ಜನರು ಕೇರಳ ಕಂಪನಿಗಳ ಆಯುರ್ವೇದ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. 

ಪಶ್ಚಿಮ ಘಟ್ಟದ ಮೇಲೆ ಭಾರ: ಕೇರಳದ ನೆರೆ ಹಾವಳಿಯಿಂದಾಗಿ ಆಯುರ್ವೇದ ಗಿಡ-ಮರಗಳು ಕೊಚ್ಚಿ ಹೋಗಿದ್ದರಿಂದ ಮುಂದೆ ಆಯುರ್ವೇದ ಉತ್ಪನ್ನಗಳ ದರ ಹೆಚ್ಚಳ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೇ ಔಷಧ ತಯಾರಿಕೆಯಲ್ಲಿ ಬೇಕಾದ ಎಲ್ಲ ದ್ರವ್ಯಗಳು ಸಿಗದಿದ್ದರೆ ಕಲಬೆರಕೆ ಕೂಡ ಮಾಡಬಹುದು ಇಲ್ಲವೇ 10 ದ್ರವ್ಯಗಳ ಔಷಧಿಗಳಲ್ಲಿ 7-8 ದ್ರವ್ಯಗಳನ್ನು ಮಾತ್ರ ಬಳಕೆ ಮಾಡಬಹುದು. ಮಹತ್ವದ ದ್ರವ್ಯಗಳನ್ನು ಔಷಧಿ
ಒಳಗೊಳ್ಳದಿದ್ದರೆ ಔಷಧಗಳ ಗುಣಮಟ್ಟ ಸಹಜವಾಗಿಯೇ ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ದರ ಹೆಚ್ಚಳ ಸಾಧ್ಯತೆ
ಕೇರಳದ ಆಯುರ್ವೇದ ಸಸ್ಯಸಂಕುಲ ಸಹಜ ಸ್ಥಿತಿಗೆ ಬರಲು ಕನಿಷ್ಠ 20 ವರ್ಷಗಳಾದರೂ ಬೇಕು ಎಂದು ಆಯುರ್ವೇದ ತಜ್ಞರು ಅಂದಾಜಿಸಿದ್ದಾರೆ. ಇದರಿಂದ ಪಶ್ಚಿಮ ಘಟ್ಟ ಸೇರಿ ಉತ್ತರ ಭಾರತದ ಆಯುರ್ವೇದ ವನಗಳ ಮೇಲೆ ಅವಲಂಬನೆ ಹೆಚ್ಚಾಗಲಿದೆ. ಕೇರಳ ಪ್ರವಾಹದಿಂದಾಗಿ ಹಲವು ಆಯುರ್ವೇದ ಔಷಧಗಳ ದರದಲ್ಲಿ ಹೆಚ್ಚಳವಾದರೂ ಅಚ್ಚರಿಯಿಲ್ಲ ಎಂದು ಆಯುರ್ವೇದ ತಜ್ಞರಾದ ಡಾ| ಎ.ಎಸ್‌.ಪ್ರಶಾಂತ, ಡಾ| ಜೆ.ಆರ್‌.ಜೋಶಿ,
ಡಾ| ಬಿ.ಬಿ.ಜೋಶಿ ಅಭಿಪ್ರಾಯಪಡುತ್ತಾರೆ. 

● ವಿಶ್ವನಾಥ ಕೋಟಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.