ಹಸಿರು, ಬಿಳಿ ಬಳಿಕ ಈಗ ನೀಲಿ ಕ್ರಾಂತಿ: ವೆಂಕಯ್ಯ ನಾಯ್ಡು
Team Udayavani, Sep 1, 2018, 6:55 AM IST
ಬೀದರ: ಭಾರತ ಹಸಿರು ಮತ್ತು ಬಿಳಿ ಕ್ರಾಂತಿಗಳೆರಡನ್ನೂ ಸಾಧಿಸಿದೆ. ಇದೀಗ ನೀಲಿ ಕ್ರಾಂತಿ ನಡೆಸಬೇಕಾಗಿದ್ದು,ಇದು ಸರ್ಕಾರದ ಚಿಂತನೆ ಕೂಡ ಆಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಶುಕ್ರವಾರ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕೃಷಿ ನೆಚ್ಚಿದ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡ ವರದಿಗಳಿವೆ.ಆದರೆ, ಪಶುಪಾಲನೆ, ಮೀನುಗಾರಿಕೆ, ಕೋಳಿ,ಕುರಿ ಸಾಕಾಣಿಕೆ ಮಾಡುವವರು ಆರ್ಥಿಕ ಹೊರೆ ಹೆಚ್ಚಾಗಿ ಸಾವಿಗೆ ಶರಣಾದ ಘಟನೆಗಳು ಇಲ್ಲ.
ಹೈನೋದ್ಯಮ ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಯಶಸ್ವಿಯಾಗುವತ್ತ ದಾಪುಗಾಲಿಡುತ್ತಿದೆ. 2014 - 15ರ ಸರ್ವೇ ಪ್ರಕಾರ ಭಾರತ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿದೆ ಎಂದರು.
ನಾನೂ ಕೃಷಿ ಕುಟುಂಬದ ಕುಡಿ: “ನಾನು ನೆರೆಯ ರಾಜ್ಯದಿಂದ ಬಂದಿದ್ದರೂ ಕೂಡ ನನಗೆ ಕರ್ನಾಟಕದೊಂದಿಗೆ ಭಾವನಾತ್ಮಕ ವಾಗಿ ಸಂಬಂಧವಿದೆ. ಅಲ್ಲದೆ, ಕೃಷಿಕುಟುಂಬದಿಂದ ಬಂದವನು ನಾನು. ಇವತ್ತು ದೇಶದ ಉಪರಾಷ್ಟ್ರಪತಿಯಾಗಿದ್ದೇನೆ. ಚಹಾ ಮಾರುವ ಬಾಲಕ ಇಂದು ದೇಶದ ಪ್ರಧಾನಿಯಾಗಿದ್ದಾರೆ’ ಎಂದರು. ಇದಕ್ಕೂ ಮೊದಲು ಕನ್ನಡದಲ್ಲೇ ತಮ್ಮ ಭಾಷಣ ಪ್ರಾರಂಭಿಸಿದರು.
11 ಚಿನ್ನದ ಪದಕ ಪಡೆಯಲು ನನ್ನ ತಂದೆ ಅಶೋಕ, ತಾಯಿ ಕಸ್ತೂರಿ ಅವರ ಪಾತ್ರ ಮಹತ್ವದ್ದಾಗಿದೆ. ನಾನು ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿ ಆಗುವ ಹಂಬಲ ಹೊಂದಿದ್ದು, ಗ್ರಾಮೀಣ ಭಾಗದ ಜನರ ಸೇವೆ ಮಾಡಬೇಕು ಎಂಬುದು ನನ್ನ ಜೀವನದ ಆಸೆಯಾಗಿದೆ.
– ಅಶ್ವಿನಿ, ಮೈಸೂರು ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ