ಸೋಲಿನ ಸೇಡಿಗೆ ಚೂರಿ ಇರಿತ; ಕೈ ಮೆರವಣಿಗೆ ಮೇಲೆ ರಾಸಾಯನಿಕ ದಾಳಿ
Team Udayavani, Sep 3, 2018, 2:13 PM IST
ತುಮಕೂರು / ಕೊಪ್ಪಳ:ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಕೆಲವೆಡೆ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.
ತುಮಕೂರಿನಲ್ಲಿ ರಾಸಾಯನಿಕ ದಾಳಿ
ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 16 ನೇ ವರ್ಡ್ನ ಬಾರ್ಲೈನ್ನಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ವಿಜಯೋತ್ಸವ ನಡೆಸುತ್ತಿದ್ದ ವೇಳೆ ದುಷ್ಕರ್ಮಿಗಳು ಆ್ಯಸಿಡ್ ಮಾದರಿಯ ರಾಸಾಯನಿಕ ದಾಳಿ ನಡೆಸಿದ್ದಾರೆ.
10 ಮಂದಿ ಗಾಯಗೊಂಡಿದ್ದು ಅವರನ್ನು ಕೋತಿ ತೋಪಿನ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ಕೊಡಲಾಗಿದೆ.
ತುಮಕೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳದಲ್ಲಿ ಸೋಲಿನ ಸೇಡಿಗೆ ಇರಿತ
ಕೊಪ್ಪಳ: ನಗರಸಭೆಯ 19 ನೇ ವಾರ್ಡ್ನಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯ ಸಂಬಂಧಿಕನೊಬ್ಬ ಜಯ ಸಾಧಿಸಿದ ಜೆಡಿಎಸ್ ಅಭ್ಯರ್ಥಿಯ ತಾಯಿಗೆ ಚೂರಿ ಯಿಂದ ಇರಿದ ಘಟನೆ ನಡೆದಿದೆ.
ಸಯ್ಯದ್ ನಿಜಾಮುದ್ದೀನ್ ಹುಸೇನಿ ಎಂಬಾತ ಅತ್ತಿಗೆ ಸೋತ ಸೇಡಿನಲ್ಲಿ ಜೆಡಿಎಸ್ ಅಭ್ಯರ್ಥಿಯ ಮನೆಗೆ ನುಗ್ಗಿ ಯಾರೂ ಸಿಗದಿದ್ದಾಗ ತಾಯಿಗೆ ಇರಿದು ಪರಾರಿಯಾಗಿದ್ದಾನೆ.
ರೆಹಮತ್ ಬಿ ಎನ್ನುವವರು ಇರಿತಕ್ಕೊಳಗಾದ ಮಹಿಳೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃತ್ಯಕ್ಕೆ ಸಹಕರಿಸಿದ ಆರೋಪಿ ಹಾಜಿ ಹುಸೇನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು , ಸಯ್ಯದ್ ನಿಜಾಮುದ್ದೀನ್ಗಾಗಿ ಶೋಧ ನಡೆಸುತ್ತಿದ್ದಾರೆ.
ಕೊಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.