ಮಕ್ಕಳಿಗೆ ಅಮಾನುಷವಾಗಿ ಥಳಿಸಿದ್ದ ತಾಯಿ ಬಂಧನ
Team Udayavani, Sep 6, 2018, 6:55 AM IST
ಕಾರವಾರ: ತನ್ನದೇ ಮೂರು ಮಕ್ಕಳಿಗೆ ಅಮಾನುಷವಾಗಿ ಥಳಿಸುತ್ತಿದ್ದ ತಾಯಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಕಾರವಾರದಲ್ಲಿ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ನೀಡಿದ್ದು, ಆರೈಕೆಗೆ ಮುಂದಾಗಿದ್ದಾರೆ.
ಬಿಜಾಪುರ ಮೂಲದ ಮಹಿಳೆ 6 ತಿಂಗಳಿಂದ ಮೂರು ಮಕ್ಕಳ ಜೊತೆ ಆಗಮಿಸಿ ಇಲ್ಲಿನ ಕಾಜೂಭಾಗದ ಪಿಂಗೆವಾಡದಲ್ಲಿ ಬಾಡಿಗೆ ಗುಡಿಸಲಿನಲ್ಲಿ ನೆಲೆಸಿದ್ದಳು. ಪಕ್ಕದ ಮಾಲೀಕರ ಮನೆಗೆ ಟಿವಿ ನೋಡಲು ಮಕ್ಕಳು ತೆರಳುತ್ತಿದ್ದರು. ಮಹಿಳೆ ಮನೆಗೆಲಸ ಮಾಡಿಕೊಂಡಿದ್ದಳು.
ಈಕೆಯ ಮೊದಲ ಪತಿ ತ್ಯಜಿಸಿದ್ದ. ಎರಡನೇ ಪತಿ ಸಹ ಈಕೆಯನ್ನು ಸಲಹುತ್ತಿರಲಿಲ್ಲ. ಮಕ್ಕಳನ್ನು ಸಾಕಲು
ಕಷ್ಟಪಡುತ್ತಿದ್ದ ಈಕೆ ಕುಡಿತಕ್ಕೆ ಶರಣಾಗಿದ್ದಳು ಎನ್ನಲಾಗಿದೆ.
ಮಕ್ಕಳನ್ನು ಥಳಿಸುತ್ತಿರುವುದನ್ನು ಪಕ್ಕದ ಮನೆಯವರು ಮೊಬೈಲ್ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದಾಗ ಘಟನೆ
ಬೆಳಕಿಗೆ ಬಂದಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಮಕ್ಕಳು ಹಸಿವಿನ
ಕಾರಣದಿಂದ ಮಾಲೀಕರ ಮನೆಯಲ್ಲಿ ಕದಿಯುತ್ತಿದ್ದರು.ಅದನ್ನು ತಡೆಯಲು ಮಕ್ಕಳಿಗೆ ಹೊಡೆದೆ ಎಂದು ತಾಯಿ ಒಪ್ಪಿಕೊಂಡಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?