ಮಕ್ಕಳಿಗೆ ಅಮಾನುಷವಾಗಿ ಥಳಿಸಿದ್ದ ತಾಯಿ ಬಂಧನ
Team Udayavani, Sep 6, 2018, 6:55 AM IST
ಕಾರವಾರ: ತನ್ನದೇ ಮೂರು ಮಕ್ಕಳಿಗೆ ಅಮಾನುಷವಾಗಿ ಥಳಿಸುತ್ತಿದ್ದ ತಾಯಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಕಾರವಾರದಲ್ಲಿ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ನೀಡಿದ್ದು, ಆರೈಕೆಗೆ ಮುಂದಾಗಿದ್ದಾರೆ.
ಬಿಜಾಪುರ ಮೂಲದ ಮಹಿಳೆ 6 ತಿಂಗಳಿಂದ ಮೂರು ಮಕ್ಕಳ ಜೊತೆ ಆಗಮಿಸಿ ಇಲ್ಲಿನ ಕಾಜೂಭಾಗದ ಪಿಂಗೆವಾಡದಲ್ಲಿ ಬಾಡಿಗೆ ಗುಡಿಸಲಿನಲ್ಲಿ ನೆಲೆಸಿದ್ದಳು. ಪಕ್ಕದ ಮಾಲೀಕರ ಮನೆಗೆ ಟಿವಿ ನೋಡಲು ಮಕ್ಕಳು ತೆರಳುತ್ತಿದ್ದರು. ಮಹಿಳೆ ಮನೆಗೆಲಸ ಮಾಡಿಕೊಂಡಿದ್ದಳು.
ಈಕೆಯ ಮೊದಲ ಪತಿ ತ್ಯಜಿಸಿದ್ದ. ಎರಡನೇ ಪತಿ ಸಹ ಈಕೆಯನ್ನು ಸಲಹುತ್ತಿರಲಿಲ್ಲ. ಮಕ್ಕಳನ್ನು ಸಾಕಲು
ಕಷ್ಟಪಡುತ್ತಿದ್ದ ಈಕೆ ಕುಡಿತಕ್ಕೆ ಶರಣಾಗಿದ್ದಳು ಎನ್ನಲಾಗಿದೆ.
ಮಕ್ಕಳನ್ನು ಥಳಿಸುತ್ತಿರುವುದನ್ನು ಪಕ್ಕದ ಮನೆಯವರು ಮೊಬೈಲ್ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದಾಗ ಘಟನೆ
ಬೆಳಕಿಗೆ ಬಂದಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಮಕ್ಕಳು ಹಸಿವಿನ
ಕಾರಣದಿಂದ ಮಾಲೀಕರ ಮನೆಯಲ್ಲಿ ಕದಿಯುತ್ತಿದ್ದರು.ಅದನ್ನು ತಡೆಯಲು ಮಕ್ಕಳಿಗೆ ಹೊಡೆದೆ ಎಂದು ತಾಯಿ ಒಪ್ಪಿಕೊಂಡಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…