ಜೆಟಿ ಕಾಲೇಜಿನಲ್ಲಿ ಜೈವಿಕ ಇಂಧನ ಕ್ರಾಂತಿ


Team Udayavani, Sep 10, 2018, 6:40 AM IST

ban10091807.jpg

ಗದಗ: ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ಸೋಮವಾರ “ಭಾರತ್‌ ಬಂದ್‌’ಗೆ ಕರೆ ನೀಡಲಾಗಿದೆ. ಆದರೆ, ನಗರದ ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ಪರ್ಯಾಯ ಇಂಧನದತ್ತ ಬೆರಳು ತೋರಿದೆ. ಸದ್ದಿಲ್ಲದೆ ಜೈವಿಕ ಇಂಧನ ಬಳಕೆ ಜತೆಗೆ, ಜನರನ್ನು ಪ್ರೇರೇಪಿಸುತ್ತಿದೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ 2012ರಲ್ಲಿ ಜಿಲ್ಲೆಗೆ ಮಂಜೂರಾಗಿದೆ. ನಗರದ ಜಗದ್ಗುರು ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾತ್ಯಕ್ಷಿಕೆ ಕೇಂದ್ರ, ಕಾಲೇಜಿನ ವಾಹನಗಳಿಗೆ ಜೈವಿಕ ಇಂಧನ ಬಳಸುವುದರ ಜತೆಗೆ ಪರ್ಯಾಯ ಇಂಧನ ಬಳಕೆಗೆ ಸಾರ್ವಜನಿಕರನ್ನು ಪ್ರೇರೇಪಿಸುತ್ತಿದೆ.

ಕೇಂದ್ರದಲ್ಲಿ ಹೊಂಗೆ, ಬೇವು ಹಾಗೂ ಜಟ್ರೋಪ ಬೀಜಗಳಿಂದ ಬಯೋ ಡೀಸೆಲ್‌ ಉತ್ಪಾದಿಸಲಾಗುತ್ತಿದೆ.ಇದಕ್ಕೆ ಬೇಕಾಗುವ ಬೀಜಗಳನ್ನು ಗದಗ, ಕೊಪ್ಪಳ,ದಾವಣಗೆರೆ ಭಾಗದ ರೈತರಿಂದಲೇ ಪ್ರತಿ ಕೆಜಿಗೆ 10ರಿಂದ 25 ರೂ. ಖರೀದಿಸಲಾಗುತ್ತಿದೆ. ನಿಗಮದ ಸಂಸ್ಕರಣಾ ಘಟಕದಲ್ಲಿ ರುಬ್ಬಿ ಎಣ್ಣೆ ತೆಗೆದ ಬಳಿಕ ಎಥೆನಾಲ್‌,ಮಿಥೇನಾಲ್‌ ಹಾಗೂ ನ್ಯಾಫೂ¤àಲಿನ್‌ ರಾಸಾಯನಿಕ ಮಿಶ್ರಣವನ್ನು ವಿವಿಧ ಯಂತ್ರೋಪಕರಣಗಳಲ್ಲಿ ಸಂಸ್ಕರಿಸಿ ಬಯೋ ಡೀಸೆಲ್‌ ಉತ್ಪಾದಿಸಲಾಗುತ್ತಿದೆ.

ಲೀಟರ್‌ ಡೀಸೆಲ್‌ಗೆ ಏನೇನು ಬೇಕು?: ಆ ಪೈಕಿ 1 ಕೆಜಿ ಹೊಂಗೆ, 7 ಕೆಜಿ ಜೆಟ್ರೋಪ್‌ (ಕಾಡು ಔಡಲ) ಹಾಗೂ 2 ಕ್ವಿಂಟಲ್‌ ಬೇವು ಬೀಜಗಳಿಂದ 1 ಲೀಟರ್‌ ಬಯೋ ಡೀಸೆಲ್‌ ತಯಾರಿಸಲಾಗುತ್ತದೆ. ಇದರ ಜತೆಗೆ, 3-5 ಕೆಜಿ ಹಿಂಡಿ, ಜಟ್ರೋಪ್‌ ಮತ್ತು ಹೊಂಗೆಯಿಂದ ಬರುವ 200 ಎಂಎಲ್‌ ಗ್ಲಿಸರಿನ್‌ ಸಹ ಉತ್ಪಾದಿಸಲಾಗುತ್ತಿದೆ. ಮಾಹಿತಿ ಕೇಂದ್ರದಲ್ಲಿ ಪ್ರತಿ ನಿತ್ಯ 30-45 ಲೀ.ಉತ್ಪಾದಿಸಲಾಗುತ್ತಿದ್ದು, ಜೆಟಿ ಕಾಲೇಜಿನ ಎಲ್ಲ ವಾಹನಗಳಿಗೆ ಇದನ್ನು ಬಳಸಲಾಗುತ್ತಿದೆ. ಅಲ್ಲದೆ, ಸ್ವಯಂ ಪ್ರೇರಿತವಾಗಿ ಮುಂದೆ ಬರುವ ಗ್ರಾಹಕರಿಗೆ ಪ್ರತಿ ಲೀಟರ್‌ಗೆ 45 ರೂ.ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೊಂಗೆ ಹಿಂಡಿಗೆ ಬೇಡಿಕೆ: ಮಣ್ಣಿನ ಫಲವತ್ತತೆ ಹೆಚ್ಚಿಸುವ, ಕಾಂಡ ಕೊರೆತ ಕೀಟನಾಶಕವಾಗಿರುವ ಹೊಂಗೆ ಹಿಂಡಿಗೆ
(ಉಪ ಉತ್ಪನ್ನ) ರೈತರಿಂದ ಹೆಚ್ಚಿನ ಬೇಡಿಕೆಯಿದೆ. ಪ್ರತಿ ಕೆಜಿಗೆ 20 ರೂ.ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಬೂನು ತಯಾರಕರು 100 ರೂ.ಬೆಲೆಯಲ್ಲಿ ಒಂದು ಲೀಟರ್‌ ದರದಲ್ಲಿ ಗ್ಲಿಸರಿನ್‌ ಕೊಂಡೊಯ್ಯುತ್ತಿದ್ದಾರೆ.

ಜೊತೆಗೆ, ಇದು ನಗರದ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ಜೈವಿಕ ಇಂಧನದ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸಲೂ ಪೂರಕವಾಗಿದೆ ಎನ್ನುತ್ತಾರೆ ಕೇಂದ್ರದ ತಾಂತ್ರಿಕ ಅಧಿಕಾರಿ ಎಂ.ಎಸ್‌.ಪಾಟೀಲ. ಇತರ ಡೀಸೆಲ್‌ಗೆ ಹೋಲಿಸಿದರೆ ಬಯೋಡೀಸೆಲ್‌ ಬೆಲೆ ಕಡಿಮೆ. ಪರ್ಯಾಯ ಇಂಧನ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚಿನ ಒತ್ತು ನೀಡಿದರೆ ಭವಿಷ್ಯದಲ್ಲಿ ದೇಶ ಸ್ವಾವಲಂಬನೆ ಕಾಣಬಹುದು. ಪರಿಸರ ಮಾಲಿನ್ಯವನ್ನೂ ತಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ.

ಕೆಲ ಯಂತ್ರೋಪಕರಣಗಳಿಗೆ ಶೇ.100, ಕೃಷಿ ಪಂಪ್‌ಸೆಟ್‌ಗೆ ಶೇ.80, ಇನ್ನೋವಾ, ಟ್ರಾÂಕ್ಟರ್‌ಗಳಿಗೆ ಶೇ.50, ಇತರ ಡೀಸೆಲ್‌ ವಾಹನಗಳಿಗೆ ಶೇ.40ರಷ್ಟು ಬಯೋ ಡೀಸೆಲ್‌ ಬಳಸಬಹುದು. ಬಯೋಡೀಸೆಲ್‌ ಮಾರಾಟಕ್ಕಿಂತ ಜಾಗೃತಿ ಮೂಡಿಸುವುದು ಕೇಂದ್ರದ ಮುಖ್ಯ ಉದ್ದೇಶ. ನಿಗಮದಿಂದ ಇಂಧನ ಪ್ರಮಾಣೀಕರಿಸುವುದು ಹಾಗೂ ಪ್ರತ್ಯೇಕ ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಚಿಂತನೆ ನಡೆದಿದೆ.
– ನಿಂಗಪ್ಪ ಪೂಜಾರ, ಘಟಕದ ಸಂಯೋಜಕರು

ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.