ಬೀದಿ ನಾಯಿಗಳ ದಾಳಿಗೆ ಬಾಲಕಿ ಬಲಿ
Team Udayavani, Sep 10, 2018, 6:30 AM IST
ಕುಣಿಗಲ್(ತುಮಕೂರು): ತಾಲೂಕಿನ ನಿಂಗಯ್ಯನಪಾಳ್ಯ ಗ್ರಾಮದ ದೊಡ್ಡಕೆರೆ ಅಂಗಳದಲ್ಲಿ ಭಾನುವಾರ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಆಕೆಯನ್ನು ಕಚ್ಚಿ ಕೊಂದು ಹಾಕಿವೆ. ಪಟ್ಟಣದ ಸಂತ ರೀತಮ್ಮನ
ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ತೇಜಸ್ವಿನಿ (12) ನಾಯಿಗಳ ದಾಳಿಯಿಂದ ಮೃತಪಟ್ಟಿರುವ ಬಾಲಕಿ.
ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಆಕೆಯ ತಾಯಿ ಗಂಗಮ್ಮ, ಬಟ್ಟೆ ಒಗೆಯಲು ದೊಡ್ಡಕೆರೆಗೆ ಹೋಗಿದ್ದರು.
ತಾಯಿಯನ್ನು ಹುಡುಕಿಕೊಂಡು ತೇಜಸ್ವಿನಿ ಕೆರೆ ಬಳಿಗೆ ಬಂದಾಗ ಏಳೆಂಟು ನಾಯಿಗಳ ಗುಂಪೊಂದು ಹಠಾತ್ತನೆ ದಾಳಿ ನಡೆಸಿದ್ದು, ಕೈ-ಕಾಲು, ಮುಖ ಸೇರಿ ದೇಹದ ಹಲವುಭಾಗವನ್ನು ತಿಂದು ಕೊಂದು ಹಾಕಿದವು. ಬಹಳ ಹೊತ್ತಾದರೂ ಬಾರದಿದ್ದಾಗ, ತಂದೆ ಗಂಗಾಧರ್ ಮಗಳನ್ನು ಹುಡುಕಿಕೊಂಡು ಕೆರೆ ಅಂಗಳಕ್ಕೆ ಬಂದಾಗ ನಾಯಿಗಳ ಗುಂಪೊಂದು ಮಗಳ ದೇಹ ತಿನ್ನುತ್ತಿದ್ದ ದೃಶ್ಯ ಕಂಡು ಕಿರುಚಿಕೊಂಡರು. ನಾಯಿಗಳನ್ನು ಓಡಿಸುವಷ್ಟರಲ್ಲಿ ಮಗಳು ಅಸು ನೀಗಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ