ತೆರಿಗೆ ದರ ಪರಿಷ್ಕರಣೆಗೆ ಗ್ರಾಪಂಗಳ ನಿರಾಸಕ್ತಿ


Team Udayavani, Sep 17, 2018, 6:35 AM IST

taxx.jpg

ಬೆಂಗಳೂರು: ಸ್ಥಳೀಯ ಸರ್ಕಾರಗಳಾಗಿರುವ ಗ್ರಾಮ ಪಂಚಾಯಿತಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂಬ ಸರ್ಕಾರದ ಪ್ರಯತ್ನಕ್ಕೆ ಸ್ವತಃ ಗ್ರಾಮ ಪಂಚಾಯಿತಿಗಳಿಂದಲೇ ಸ್ಪಂದನೆ ಸಿಗುತ್ತಿಲ್ಲ.

ಇದಕ್ಕೆ ಉದಾಹರಣೆ ಎಂದರೆ 2015ರಲ್ಲೇ ತಿದ್ದುಪಡಿ ತಂದಿದ್ದರೂ ರಾಜ್ಯದ 6,024 ಗ್ರಾಪಂಗಳ ಪೈಕಿ ಕೇವಲ 1,400 ಗ್ರಾಪಂಗಳು ಮಾತ್ರ ತೆರಿಗೆ ದರ ಪರಿಷ್ಕರಣೆ ಮಾಡಿವೆ. ಗ್ರಾಪಂಗಳ ಈ ಅಸಡ್ಡೆಯಿಂದಾಗಿ ಕೋಟಿಗಟ್ಟಲೇ ಆದಾಯ ಖೋತಾ ಆಗುತ್ತಿದೆ.

ತೆರಿಗೆ ದರ ಪರಿಷ್ಕರಣೆ ಮಾಡಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರೂ, ಈ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ ಕಾಲಕಾಲಕ್ಕೆ ಸುತ್ತೋಲೆಗಳನ್ನು ಹೊರಡಿಸಿ ನೆನಪಿಸುತ್ತಿದ್ದರೂ ಗ್ರಾಪಂಗಳು ಮಾತ್ರ ಎಚೆತ್ತುಕೊಳ್ಳುತ್ತಿಲ್ಲ. ಗ್ರಾಪಂಗಳು ತಮ್ಮದೇ ಸ್ವಯಂಕೃತ ಅಪರಾಧದಿಂದಾಗಿ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶಗಳನ್ನು ಕೈಚೆಲ್ಲುತ್ತಿವೆ. ಒಂದೆಡೆ 6,024 ಗ್ರಾಪಂಗಳಲ್ಲಿ ಸದ್ಯ 1 ಸಾವಿರ ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿದಿದ್ದರೆ,ಮತ್ತೂಂದು ಕಡೆ ಕಳೆದ ಮೂರು ವರ್ಷಗಳಿಂದ 5 ಸಾವಿರಕ್ಕೂ ಹೆಚ್ಚು ಗ್ರಾಪಂಗಳು ತೆರಿಗೆಯನ್ನೇ ಪರಿಷ್ಕರಿಸಿಲ್ಲ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಬಹುದೊಡ್ಡ ತೊಡಕಾಗುತ್ತಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಪಂಗಳಲ್ಲಿ ಬಾಕಿ ತೆರಿಗೆ ವಸೂಲಿ ಮತ್ತು ತೆರಿಗೆ ಪರಿಷ್ಕರಣೆಗೆ ವಿಶೇಷ ಅಭಿಯಾನ ನಡೆಸಲು ಮುಂದಾಗಿದೆ. ಬಾಕಿ ವಸೂಲಿ ಮತ್ತು ತೆರಿಗೆ ಪರಿಷ್ಕರಣೆ ಬಗ್ಗೆ ಪ್ರಗತಿ ತಿಂಗಳು ಕಡ್ಡಾಯವಾಗಿ ಪರಿಶೀಲಿಸಿ ಪ್ರಗತಿ ಸಾಧಿಸುವ ಗ್ರಾಪಂಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಹಿನ್ನಡೆ ಸಾಧಿಸುವ ಗ್ರಾಪಂಗಳಿಗೆ ಎಚ್ಚರಿಕೆ ಕೊಟ್ಟು, ಬಾಕಿ ವಸೂಲಿ ಕಾರ್ಯಚುರುಕುಗೊಳಿಸಲು ತಾಕೀತು ಮಾಡುವಂತೆ ಎಲ್ಲ ಜಿಪಂ ಸಿಇಓಗಳಿಗೆ ಸೂಚನೆ ನೀಡಿದೆ.

ಯಾವುದಕ್ಕೆ ಎಷ್ಟು ತೆರಿಗೆ?: ವಾಸದ ಕಟ್ಟಡಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.05ರಿಂದ ಗರಿಷ್ಠ ಶೇ.0.10, ವಾಣಿಜ್ಯ ಕಟ್ಟಡಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.20ರಿಂದ ಶೇ.05, ಕೈಗಾರಿಕೆಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ. 0.4ರಿಂದ ಗರಿಷ್ಠ ಶೇ.1, ಖಾಲಿ ಜಮೀನುಗಳಿಗೆ ಸಾವಿರ ಚದರ ಅಡಿ ಗಿಂತ ಹೆಚ್ಚಿಲ್ಲದ ಜಮೀನಿಗೆ ಅದರ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.05ರಿಂದ ಗರಿಷ್ಠ ಶೇ.0.1, ಸಾವಿರದಿಂದ 4 ಸಾವಿರ ಚ. ಮೀ.ಗಿಂತ ಕಡಿಮೆ ಜಮೀನಿಗೆ ಸ್ವತ್ತಿನ ಮೌಲ್ಯದ ಮೇಲೆ ಕನಿಷ್ಠ 0.02ರಿಂದ ಗರಿಷ್ಠ ಶೇ.0.05, 4 ಸಾವಿರ ಚ.ಮೀ.ಗಿಂತ ಹೆಚ್ಚಿರುವ ಜಮೀನಿಗೆ ಸ್ವತ್ತಿನ ಮೂಲ ಮೌಲ್ಯದ ಕನಿಷ್ಠ ಶೇ.0.01ರಿಂದ ಗರಿಷ್ಠ ಶೇ. 0.02 ತೆರಿಗೆ ವಿಧಿಸಬಹುದು.

ಅದೇ ರೀತಿ ಮೊಬೈಲ್‌ ಟವರ್‌ಗೆ ಪ್ರತಿ ಟವರ್‌ಗೆ ವರ್ಷಕ್ಕೆ 12 ಸಾವಿರ ರೂ., ವಿಂಡ್‌ಮಿಲ್‌ಗ‌ಳಿಗೆ ಟರ್ಬೈನ್‌ಗಳನ್ನು ಆಧರಿಸಿ ವಾರ್ಷಿಕ 1 ಲಕ್ಷ ರೂ.ವರೆಗೆ, ಸೋಲಾರ್‌ ಪಾರ್ಕ್‌ಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.50ರಿಂದ ಗರಿಷ್ಠ ಶೇ.1.50, ಆಪ್ಟಿಕಲ್‌ ಫೈಬರ್‌ ಕೇಬಲ್‌ಗ‌ಳಿಗೆ ರಸ್ತೆ ಅಗೆಯಲು ಮೂರು ನಾಳಗಳಿಗೆ ಪ್ರತಿ ಮೀಟರ್‌ಗೆ 450 ರೂ. ಮನೋರಂಜನೆ ಮೇಲೆ ಪ್ರತಿ ಪ್ರದರ್ಶನಕ್ಕೆ 50 ರೂ, ವಾಹನ ನಿಲುಗಡೆಗೆ ಬಸ್‌, ಲಾರಿಗಳಿಗೆ ದಿನಕ್ಕೆ 50 ರೂ, ಕಾರ್‌, ಲಘು ಮೋಟಾರು ವಾಹನಗಳಿಗೆ 20 ರೂ, ಮೋಟಾರು ಸೈಕಲ್‌ಗೆ 10 ರೂ, ಇತರೆ ವಾಹನಗಳಿಗೆ ಕನಿಷ್ಠ ದಿನಕ್ಕೆ 1ರಿಂದ ಗರಿಷ್ಠ 10 ರೂ., ಮಾರುಕಟ್ಟೆ ಪ್ರದೇಶಗಳಲ್ಲಿ ವಿಸ್ತೀರ್ಣ ಆಧರಿಸಿ ಕನಿಷ್ಠ 2ರಿಂದ ಗರಿಷ್ಠ 5 ರೂ.ಸಂತೆ ಮತ್ತು ಜಾತ್ರೆಗಳಲ್ಲಿ ಮಾರಾಟಕ್ಕೆ ತರುವ ಜಾನುವಾರುಗಳಿಗೆ ದಿನಕ್ಕೆ 5 ರೂ, ನೀರು ಸರಬರಾಜು ಮಾಡಲು ಮನೆಗಳಿಗೆ ನೇರ ಸಂಪರ್ಕಕ್ಕೆ ಕನಿಷ್ಠ 25 ರೂ, ಸಾರ್ವಜನಿಕ ನಲ್ಲಿ ನೀರು ಕನಿಷ್ಠ 10 ರೂ. ತೆರಿಗೆ ವಿಧಿಸಲು ಅವಕಾಶವಿದೆ.

ಬಾಕಿ ವಸೂಲಿ ಮತ್ತು ತೆರಿಗೆ ಪರಿಷ್ಕರಣೆಯಲ್ಲಿ ಆಗುತ್ತಿರುವ ವಿಳಂಬ ಇಲಾಖೆಯ ಗಮನಕ್ಕೆ ಬಂದಿದೆ. ಇದಕ್ಕಾಗಿ ಅಭಿಯಾನ ರೂಪದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಶುಕ್ರವಾರಷ್ಟೇ (ಸೆ.7) ಮತ್ತೂಂದು ಸಭೆ ನಡೆಸಿ ಜಿಪಂ ಸಿಇಓಗಳಿಗೆ ತಾಕೀತು ಮಾಡಲಾಗಿದೆ.
–  ಎಲ್‌.ಕೆ. ಅತೀಕ್‌, ಪ್ರಧಾನ
ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ

– ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.