ಆಪರೇಶನ್ ಕಮಲ ಸಿಎಂ ಸೃಷ್ಟಿಸಿದ ಹೈಡ್ರಾಮಾ: ಶೆಟ್ಟರ್
Team Udayavani, Sep 18, 2018, 6:35 AM IST
ಹುಬ್ಬಳ್ಳಿ: ಸಮರ್ಪಕ ಆಡಳಿತ ನೀಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಎಂದು ಹೈಡ್ರಾಮಾ ಸೃಷ್ಟಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಆಪರೇಶನ್ ಕಮಲ ನಡೆಯುತ್ತಿಲ್ಲ. ಅವರ
ಬಳಿಯೇ ಸಾಕಷ್ಟು ತನಿಖಾ ಸಂಸ್ಥೆಗಳಿವೆ, ಆ ಮೂಲಕ ತನಿಖೆ ಮಾಡಿಸಲಿ. ಇಂತಹ ಚಟುವಟಿಕೆಗಳು ನಡೆಯುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಿ. ಆಪರೇಶನ್ ಕಮಲ ನಡೆಯುತ್ತಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದರು.