ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇವೆ,ಯಾರನ್ನೂ ಕರೆದಿಲ್ಲ:ಶ್ರೀರಾಮುಲು
Team Udayavani, Sep 19, 2018, 11:41 AM IST
ಬೆಂಗಳೂರು:ಬಿಜೆಪಿಯವರು ಯಾವುದೇ ಶಾಸಕರನ್ನು ಪಕ್ಷಕ್ಕೆ ಕರೆದಿಲ್ಲ.ಬೇಕಾದರೆ ದೇವರ ಮೇಲೆ ಪ್ರಮಾಣ ಮಾಡಲೂ ಸಿದ್ಧ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು ರಾಜ್ಯ ಸರ್ಕಾರ ವರ್ಗಾವಣೆಗಳ ದಂಧೆಯಲ್ಲಿ ನಿರತವಾಗಿದೆ. ಹಣಕ್ಕಾಗಿ ಅಸಮಾಧಾನ ಭುಗಿಲೆದ್ದಿದೆ.ಸರ್ಕಾರ ಪತನವಾದರೆ ಬಿಜೆಪಿ ಕಾರಣವಾಗುವುದಿಲ್ಲ.
ಈ ಸರ್ಕಾರದಲ್ಲಿ ಎಲ್ಲವೂ ರೊಕ್ಕದಿಂದ ನಡೆಯುತ್ತಿದೆ.ಎಲ್ಲದಕ್ಕೂ ಬಿಜೆಪಿ ಪರಿಹಾರ ನೀಡಲು ಸಿದ್ದವಿದೆ ಎಂದರು.
ನಾವೇನಾದರೂ ಯಾರನ್ನಾದರೂ ಪಕ್ಷಕ್ಕೆ ಸೆಳೆದ ಕುರಿತು ದಾಖಲೆಗಳಿದ್ದರೆ ತನ್ನಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಸವಾಲೆಸೆದರು.