ಧಾರ್ಮಿಕ ದತ್ತಿ ಪಟ್ಟಿಗೆ ಅಂಜನಾದ್ರಿ ಬೆಟ್ಟ ಸೇರ್ಪಡೆ
Team Udayavani, Sep 27, 2018, 6:05 AM IST
ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಕಾಯ್ದೆ (1997) ಅನ್ವಯ ಅಧಿಕಾರ ಬಳಸಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯ ಸಂಸ್ಥೆಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಕುರಿತಂತೆ ಕಂದಾಯ ಇಲಾಖೆ (ಮುಜರಾಯಿ) ಅಧೀನ ಕಾರ್ಯದರ್ಶಿ ಬಿ.ಎಸ್.ನಾಗರತ್ನಮ್ಮ ಆದೇಶ ಹೊರಡಿಸಿದ್ದಾರೆ.
ಕಳೆದ ಹಲವು ದಶಕಗಳಿಂದ ದೇವಾಲಯ ಕಾರ್ಯಕ್ರಮಗಳನ್ನು ಆನೆ ಗೊಂದಿ ರಾಜ ವಂಶಸ್ಥರನ್ನೊಳಗೊಂಡ ಟ್ರಸ್ಟ್ ನಡೆಸುತ್ತಿತ್ತು. ಟ್ರಸ್ಟ್ನಿಂದ ನೇಮಕಗೊಂಡ ಉತ್ತರ ಭಾರತದ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಟ್ರಸ್ಟ್ ಆದೇಶ ಧಿಕ್ಕರಿಸಿ ಸ್ವಂತ ಟ್ರಸ್ಟ್ ಮಾಡಿದ್ದರಿಂದ ಅವರನ್ನು ಅರ್ಚಕ ಸ್ಥಾನದಿಂದ ಟ್ರಸ್ಟ್ ಕಮಿಟಿ ಪದಚ್ಯುತಿಗೊಳಿಸಿತ್ತು. ಟ್ರಸ್ಟ್ ಮತ್ತು ಬಾಬಾ ಬೆಂಬಲಿಗರ ನಡುವೆ ಪರಸ್ಪರ ಸಂಘರ್ಷ ಜರುಗಿ ಪೊಲೀಸ್ ವರದಿಯನ್ವಯ ಜಿಲ್ಲಾಡಳಿತ ಸರಕಾರದ ವಶಕ್ಕೆ ಪಡೆದಿತ್ತು.
ಇದೀಗ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಪಟ್ಟಿಗೆ ಅಂಜನಾದ್ರಿ ಬೆಟ್ಟ ಸೇರ್ಪಡೆಯಾಗಿದ್ದು ಎಲ್ಲಾ ಕಾರ್ಯವನ್ನು ಧಾರ್ಮಿಕ ಇಲಾಖೆಯಿಂದ ನೇಮಕಗೊಳ್ಳುವ ಕಮಿಟಿ ನೋಡಿಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Bangaluru cafe ಸ್ಫೋಟದ ಸಂಚುಕೋರ ಎನ್ಐಎ ಬಲೆಗೆ: ಯಾರಿದು ಷರೀಫ್?
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್