ಕಾಂಗ್ರೆಸ್ಗೆ ಎಚ್ಡಿಕೆ ಅನಿವಾರ್ಯ: ಅಂಬರೀಶ್
Team Udayavani, Oct 6, 2018, 6:50 AM IST
ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಬಿಟ್ಟರೆ ಸಮ್ಮಿಶ್ರ ಸರ್ಕಾರ ಯಾವ ಕಾರಣಕ್ಕೂ ಉಳಿಯುವುದಿಲ್ಲ ಎಂದು ನಟ, ಮಾಜಿ ಸಚಿವ ಅಂಬರೀಶ್ ಹೇಳುವ ಮೂಲಕ ಎಚ್ಡಿಕೆ ಪರ ಬ್ಯಾಟಿಂಗ್ ಮಾಡಿದರು.
ನಗರದಲ್ಲಿ ಮಾತನಾಡಿ, ಕಾಂಗ್ರೆಸ್ಗೆ ಕುಮಾರಸ್ವಾಮಿ ಅನಿವಾರ್ಯವೇ ಹೊರತು, ಕುಮಾರಸ್ವಾಮಿಗೆ ಕಾಂಗ್ರೆಸ್ ಅನಿವಾರ್ಯ ಅಲ್ಲ. ಕುಮಾರಸ್ವಾಮಿ ಬಿಟ್ಟರೆ ಸರ್ಕಾರದ ಉಳಿವು ಖಂಡಿತಾ ಸಾಧ್ಯವಿಲ್ಲ. ಸರ್ಕಾರ ಬೀಳಿಸಿದರೆ ಮುಂದೇನಾಗುತ್ತೆ ಅನ್ನೋದನ್ನು ಕಾಂಗ್ರೆಸ್ ನಾಯಕರು ಯೋಚಿಸಬೇಕು ಎಂದು ಹೇಳಿದರು.
ಅಭಿಷೇಕ್ ನಾನಿರುವವರೆಗೂ ರಾಜಕೀಯಕ್ಕೆ ಬರುವುದಿಲ್ಲ. ಅವನೀಗ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾನೆ. ಆ ಕ್ಷೇತ್ರದಲ್ಲೇ ಬೆಳವಣಿಗೆ ಕಾಣಬೇಕು ಎನ್ನುವುದು ನನ್ನ ಆಸೆ.
– ಅಂಬರೀಶ್, ಮಾಜಿ ಸಚಿವ