ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಸೇವೆ ನಾಳೆಯಿಂದ ಪುನಾರಂಭ
Team Udayavani, Oct 11, 2018, 6:25 AM IST
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಸಕಲೇಶಪುರ-ಸುಬ್ರಮಣ್ಯ ಮಾರ್ಗದ ಘಾಟ್ ವಲಯದಲ್ಲಿ ಭೂಕುಸಿತದ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೈಲುಗಳ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.
ಕಣ್ಣೂರು/ಕಾರವಾರ-ಬೆಂಗಳೂರು ನಗರ ಎಕ್ಸ್ಪ್ರೆಸ್ (16512/16514) ರೈಲು ಸೇವೆ ಪುನಾರಂಭಗೊಳ್ಳಲಿದೆ. ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ (16515) ರೈಲು ಸೇವೆ ಅ.12ರಿಂದ, ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ (16516) ರೈಲು ಅ.13ರಿಂದ, ಯಶವಂತಪುರ-ಮಂಗಳೂರು ಎಕ್ಸ್ಪ್ರೆಸ್ (16575) ರೈಲು ಅ.11ರಿಂದ ಮತ್ತು ಮಂಗಳೂರು-ಯಶವಂತಪುರ ಎಕ್ಸ್ಪ್ರೆಸ್ (16576) ರೈಲು ಅ.14ರಿಂದ ಪುನಾರಂಭವಾಗಲಿದೆ. ಬೆಂಗಳೂರು ನಗರ-ಕಣ್ಣೂರು/ಕಾರವಾರ ಎಕ್ಸ್ಪ್ರೆಸ್ (16517/16523) ರೈಲು ಅ.14ರಿಂದ ಹಾಗೂ ಕಣ್ಣೂರು/ಕಾರವಾರ-ಬೆಂಗಳೂರು ನಗರ ಎಕ್ಸ್ಪ್ರೆಸ್ (16518/16524) ರೈಲು ಅ.11ರಿಂದ ಸೇವೆ ಆರಂಭಿಸಲಿದೆ.
ಸಮಯ ಪರಿಷ್ಕರಣೆ: ಬೆಂಗಳೂರು-ಮೈಸೂರು ಟಿಪ್ಪು ಎಕ್ಸ್ಪ್ರೆಸ್ (12614) ರೈಲಿನ ಸಮಯವನ್ನು ಅ.13ರಿಂದ ಪರಿಷ್ಕರಿಸಲಾಗಿದೆ. ಎಕ್ಸ್ಪ್ರೆಸ್ ರೈಲು ಬೆಂಗಳೂರಿನಿಂದ ಮಧ್ಯಾಹ್ನ 3:15ಕ್ಕೆ (ಮುಂಚೆ 3:00) ಹೊರಡಲಿದ್ದು, ಮೈಸೂರಿಗೆ ಸಂಜೆ 5:45ಕ್ಕೆ (ಮುಂಚೆ ಸಂಜೆ 5:30) ಬಂದು ಸೇರಲಿದೆ.
ರೈಲು ಸಂಚಾರ ರದ್ದು: ಕೇಂದ್ರೀಯ ರೈಲ್ವೆಯ ಸೊಲ್ಲಾಪುರ-ವಾಡಿ ವಲಯಗಳ ಮಧ್ಯೆ ನಾಗನ್ಸೂರ-ಬರೋಟಿ ನಿಲ್ದಾಣಗಳ ಮಧ್ಯೆ ನಾನ್ ಇಂಟರ್ಲಾಕಿಂಗ್ ಕಾಮಗಾರಿ ಪ್ರಯುಕ್ತ ಕೆಲ ರೈಲುಗಳ ಸೇವೆ ರದ್ದುಪಡಿಸಲಾಗಿದೆ. ಅ.11ರಂದು ಹೈದರಾಬಾದ್-ವಿಜಯಪುರ ಪ್ಯಾಸೆಂಜರ್ (57130), ಅ.11 ಹಾಗೂ 12ರಂದು ವಿಜಯಪುರ-ಹೈದರಾಬಾದ್ ಪ್ಯಾಸೆಂಜರ್ (57129), ಅ.11ರಿಂದ 15ರವರೆಗೆ ರಾಯಚೂರು-ಹೈದರಾಬಾದ್ ಪ್ಯಾಸೆಂಜರ್ (57134), ಅ.11ರಿಂದ 15ರವರೆಗೆ ವಿಜಯಪುರ-ರಾಯಚೂರ ಪ್ಯಾಸೆಂಜರ್ (57133) ರೈಲುಗಳ ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ